‘ಪಹಣಿ ಸಮಸ್ಯೆಇಡೀ ರಾಜ್ಯದಲ್ಲಿ ಕಂಡುಬಂದಿದೆ. ಖಾಸಗಿ ಏಜೆನ್ಸಿಗಳಿಗೆ ವಹಿಸಿ ಸರ್ಕಾರ ಮೊಬೈಲ್ ಆ್ಯಪ್ಗಳ ಮೂಲಕ ಬೆಳೆ ಸಮೀಕ್ಷೆ ಮಾಡಿಸಿತ್ತು. ಆದರೆ ಎಂಟ್ರಿ ಸರಿಯಾಗಿ ಆಗಲಿಲ್ಲ. ಮೊದಲು ಗ್ರಾಮ ಲೆಕ್ಕಿಗರು ನಾವು ರಾಗಿ ಬೆಳೆದಿದ್ದೇವೆ ಎಂದು ದೃಢೀಕರಣ ಮಾಡಿಕೊಡುತ್ತಿದ್ದರು. ಅದನ್ನು ಆಧರಿಸಿ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುತ್ತಿದ್ದರು. ಈ ವರ್ಷ ಬೆಳೆ ಚೆನ್ನಾಗಿ ಬಂದಿದೆ. ಬೆಂಬಲ ಬೆಲೆಯ ಗೊಂದಲದಿಂದ ರೈತರಿಗೆ ಉತ್ತಮ ಬೆಳೆಯ ಲಾಭ ಸಿಗುತ್ತಿಲ್ಲ’ ಎಂದು ರೈತರು ದೂರಿದರು.