ದೇವನಹಳ್ಳಿ: ನೀರಿನ ಫ್ಲಾಸ್ಕ್ ಹೊರ ಭಾಗಕ್ಕೆ ಚಿನ್ನದ ಪುಡಿ ಲೇಪಿಸಿ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸೌದಿ ಅರೇಬಿಯಾದ ಜೆಡ್ಡಾದಿಂದ ಜ.28 ರಂದು ಬೆಂಗಳೂರಿಗೆ ಬಂದ ಪ್ರಯಾಣಿಕನ ಫ್ಲಾಸ್ಕ್ ತಪಾಸಣೆ ನಡೆಸಿದಾಗ ಚಿನ್ನ ಕಳ್ಳ ಸಾಗಣೆ ಪ್ರಕರಣ ಬೆಳಕಿಗೆ ಬಂದಿದೆ.
122 ಗ್ರಾಂ ಚಿನ್ನದ ಪುಡಿ ವಶಕ್ಕೆ ಪಡೆಯಲಾಗಿದ್ದು ಅದರ ಮೌಲ್ಯ ₹7.52 ಲಕ್ಷ ಎಂದು ಅಂದಾಜಿಸಲಾಗಿದೆ.
ಇತರ ಪುಡಿಗಳ ಮಿಶ್ರಣದೊಂದಿಗೆ ಚಿನ್ನದ ಪುಡಿ ಬೆರೆಸಿ ಫ್ಲಾಸ್ಕ್ ಹೊರ ಭಾಗಕ್ಕೆ ಲೇಪಿಸಲಾಗಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.