ದೊಡ್ಡಬಳ್ಳಾಪುರ: ತಾಲ್ಲೂಕಿನ ನಾರನಹಳ್ಳಿ ಗ್ರಾಮದಲ್ಲಿ ಕಳ್ಳರು ದೇವಾಲಯದ ಬಾಗಿಲು ಮುರಿದು ಹುಂಡಿಯನ್ನು ಕಳವು ಮಾಡಿದ್ದಾರೆ.
ನಾರನಹಳ್ಳಿ ಗ್ರಾಮದ ಅಮ್ಮಾಜಮ್ಮ ದೇವಾಲಯದಲ್ಲಿನ ಹುಂಡಿಯನ್ನು ಹೊತ್ತೊಯ್ದು ಗ್ರಾಮದ ಹೊರ ವಲಯದ ನೀಲಗಿರಿ ತೋಪಿನಲ್ಲಿ ಹುಂಡಿ ಒಡೆದು ಹಣವನ್ನು ದೋಚಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.