<p><strong>ಆನೇಕಲ್:</strong>ಅಣ್ಣಯ್ಯನದೊಡ್ಡಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆಬಯಲು ಬಹಿರ್ದೆಸೆಗೆ ಹೋದವರಿಗೆ ಹೂಮಾಲೆ ಹಾಕಿ ಸ್ವಾಗತಿಸಿದ ವಿಚಿತ್ರ ಪ್ರಸಂಗ ನಡೆಯಿತು.</p>.<p>ರಾಗಿಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಶಿವನಹಳ್ಳಿ ರಾಮಕೃಷ್ಣಾಶ್ರಮವು ಗ್ರಾಮದಲ್ಲಿರುವ ನೂರು ಕುಟುಂಬಗಳಿಗೂ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿವೆ. ಆದರೆ, ಗ್ರಾಮದ ಜನರು ಈ ಶೌಚಾಲಯಗಳನ್ನು ಬಳಸುತ್ತಿಲ್ಲ.</p>.<p>ಈ ಬಗ್ಗೆ ಮಾಹಿತಿ ಪಡೆದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ದೇವರಾಜೇಗೌಡ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಮ್ಮ ಬುಧವಾರ ಬೆಳಿಗ್ಗೆ 6ರ ವೇಳೆಗೆ ಅಣ್ಣಯ್ಯನದೊಡ್ಡಿಯಲ್ಲಿ ಹಾಜರಾದರು.</p>.<p>ಗ್ರಾಮಸ್ಥರು ಕೆರೆ, ಬೇಲಿ, ಹೊಲಗಳ ಕಡೆಗೆ ಬಹಿರ್ದೆಸೆಗೆ ಹೋಗಿ ಬರುತ್ತಿರುವ ದೃಶ್ಯಗಳನ್ನು ಕಣ್ಣಾರೆ ಕಂಡರು. ಕೆರೆ ಕಡೆಗೆ ಹೋಗಿ ಬರುತ್ತಿದ್ದವರನ್ನು ತಡೆದು ಹೂಮಾಲೆ ಹಾಕಿದರು. ಗ್ರಾಮಸ್ಥರು ಕಕ್ಕಾಬಿಕ್ಕಿಯಾದಾಗ, ಇನ್ನು ಮುಂದೆ ಮನೆಗಳಲ್ಲಿರುವ ಶೌಚಾಲಯಗಳನ್ನೇ ಬಳಸುವಂತೆ ಮನವಿ ಮಾಡಿದರು.</p>.<p>ಮನೆಯಲ್ಲಿ ಶೌಚಾಲಯವಿದ್ದರೂ ಮೊದಲಿನಿಂದಲೂ ರೂಢಿಸಿಕೊಂಡು ಬಂದಿರುವ ಬಯಲಿಗೆ ಹೋಗುವುದನ್ನು ಬಿಡಲಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದರು. ನಾಳೆಯಿಂದಲೇ ಶೌಚಾಲಯಗಳನ್ನು ಬಳಸುವುದಾಗಿ ಭರವಸೆ ನೀಡಿದರು.</p>.<p>ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲುಸರ್ಕಾರ ಮನೆ ಮನೆಗಳಿಗೂ ಶೌಚಾಲಯ ನಿರ್ಮಿಸಿಕೊಡಲು ಅನುದಾನ ಮಂಜೂರು ಮಾಡಿದೆ.ಆನೇಕಲ್ ತಾಲ್ಲೂಕಿನಲ್ಲಿ 28 ಗ್ರಾಮ ಪಂಚಾಯಿತಿಗಳಿದ್ದು, ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದುಸರ್ಕಾರ ಘೋಷಣೆ ಮಾಡಿದೆ.</p>.<p>ಶೌಚಾಲಯಗಳಿದ್ದರೂ, ಗ್ರಾಮಸ್ಥರು ಮಾತ್ರ ಅವುಗಳ ಬಳಕೆ ಮಾಡುತ್ತಿಲ್ಲ.ಆನೇಕಲ್ ತಾಲ್ಲೂಕಿನ ರಾಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣ್ಣಯ್ಯನದೊಡ್ಡಿ ಸೇರಿದಂತೆಹಲವು ಗ್ರಾಮಗಳಲ್ಲಿಇಂದಿಗೂ ಬಯಲು ಬಹಿರ್ದಸೆ ಪದ್ಧತಿ ರೂಢಿಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್:</strong>ಅಣ್ಣಯ್ಯನದೊಡ್ಡಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆಬಯಲು ಬಹಿರ್ದೆಸೆಗೆ ಹೋದವರಿಗೆ ಹೂಮಾಲೆ ಹಾಕಿ ಸ್ವಾಗತಿಸಿದ ವಿಚಿತ್ರ ಪ್ರಸಂಗ ನಡೆಯಿತು.</p>.<p>ರಾಗಿಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಶಿವನಹಳ್ಳಿ ರಾಮಕೃಷ್ಣಾಶ್ರಮವು ಗ್ರಾಮದಲ್ಲಿರುವ ನೂರು ಕುಟುಂಬಗಳಿಗೂ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿವೆ. ಆದರೆ, ಗ್ರಾಮದ ಜನರು ಈ ಶೌಚಾಲಯಗಳನ್ನು ಬಳಸುತ್ತಿಲ್ಲ.</p>.<p>ಈ ಬಗ್ಗೆ ಮಾಹಿತಿ ಪಡೆದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ದೇವರಾಜೇಗೌಡ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಮ್ಮ ಬುಧವಾರ ಬೆಳಿಗ್ಗೆ 6ರ ವೇಳೆಗೆ ಅಣ್ಣಯ್ಯನದೊಡ್ಡಿಯಲ್ಲಿ ಹಾಜರಾದರು.</p>.<p>ಗ್ರಾಮಸ್ಥರು ಕೆರೆ, ಬೇಲಿ, ಹೊಲಗಳ ಕಡೆಗೆ ಬಹಿರ್ದೆಸೆಗೆ ಹೋಗಿ ಬರುತ್ತಿರುವ ದೃಶ್ಯಗಳನ್ನು ಕಣ್ಣಾರೆ ಕಂಡರು. ಕೆರೆ ಕಡೆಗೆ ಹೋಗಿ ಬರುತ್ತಿದ್ದವರನ್ನು ತಡೆದು ಹೂಮಾಲೆ ಹಾಕಿದರು. ಗ್ರಾಮಸ್ಥರು ಕಕ್ಕಾಬಿಕ್ಕಿಯಾದಾಗ, ಇನ್ನು ಮುಂದೆ ಮನೆಗಳಲ್ಲಿರುವ ಶೌಚಾಲಯಗಳನ್ನೇ ಬಳಸುವಂತೆ ಮನವಿ ಮಾಡಿದರು.</p>.<p>ಮನೆಯಲ್ಲಿ ಶೌಚಾಲಯವಿದ್ದರೂ ಮೊದಲಿನಿಂದಲೂ ರೂಢಿಸಿಕೊಂಡು ಬಂದಿರುವ ಬಯಲಿಗೆ ಹೋಗುವುದನ್ನು ಬಿಡಲಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದರು. ನಾಳೆಯಿಂದಲೇ ಶೌಚಾಲಯಗಳನ್ನು ಬಳಸುವುದಾಗಿ ಭರವಸೆ ನೀಡಿದರು.</p>.<p>ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲುಸರ್ಕಾರ ಮನೆ ಮನೆಗಳಿಗೂ ಶೌಚಾಲಯ ನಿರ್ಮಿಸಿಕೊಡಲು ಅನುದಾನ ಮಂಜೂರು ಮಾಡಿದೆ.ಆನೇಕಲ್ ತಾಲ್ಲೂಕಿನಲ್ಲಿ 28 ಗ್ರಾಮ ಪಂಚಾಯಿತಿಗಳಿದ್ದು, ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದುಸರ್ಕಾರ ಘೋಷಣೆ ಮಾಡಿದೆ.</p>.<p>ಶೌಚಾಲಯಗಳಿದ್ದರೂ, ಗ್ರಾಮಸ್ಥರು ಮಾತ್ರ ಅವುಗಳ ಬಳಕೆ ಮಾಡುತ್ತಿಲ್ಲ.ಆನೇಕಲ್ ತಾಲ್ಲೂಕಿನ ರಾಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣ್ಣಯ್ಯನದೊಡ್ಡಿ ಸೇರಿದಂತೆಹಲವು ಗ್ರಾಮಗಳಲ್ಲಿಇಂದಿಗೂ ಬಯಲು ಬಹಿರ್ದಸೆ ಪದ್ಧತಿ ರೂಢಿಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>