ದೊಡ್ಡಬಳ್ಳಾಪುರ: ಘಾಟಿ ಕ್ಷೇತ್ರದಲ್ಲಿ ರಥೋತ್ಸವಕ್ಕೂ ಮುನ್ನ ಸುಬ್ರಹ್ಮಣ್ಯಸ್ವಾಮಿ ಉತ್ಸವಮೂರ್ತಿಯನ್ನು ಭೋವಿ ಹಾಗೂ ಲಂಬಾಣಿ ಸಮುದಾಯ ಸೇರಿದಂತೆ ಇತರ ಜಾತಿ ಜನರು ವಾಸ ಮಾಡುವ ಬೀದಿಗಳಲ್ಲೂ ಮೆರವಣಿಗೆ ನಡೆಸುವಂತೆ 2019ರ ಜೂನ್ ತಿಂಗಳಲ್ಲೇ ಮುಜರಾಯಿ, ಸಮಾಜ ಕಲ್ಯಾಣ ಸೇರಿದಂತೆ ಇತರೆ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ಮನವಿಗೆ ಬೆಲೆ ನೀಡದೆ ಕೇವಲ ದೇವಾಲಯದ ಅರ್ಚಕರ ಮನೆ ಹಾಗೂ ಇತರೆ ಕಲ್ಯಾಣ ಮಂಟಪದ ಬಳಿಗೆ ಮಾತ್ರ ಉತ್ಸವಮೂರ್ತಿ ಮೆರವಣಿಗೆ ಕೊಂಡೊಯ್ಯಲಾಗಿದೆ. ಇದು ಖಂಡನೀಯ ಎಂದು ಭೋವಿ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.