<p><strong>ಆನೇಕಲ್: </strong>ತಾಲ್ಲೂಕಿನ ಚಂದಾಪುರದಲ್ಲಿ ಬೆಂಗಳೂರು ಜೆಸಿಬಿ, ಟ್ರಾಕ್ಟರ್ ಮತ್ತು ಟಿಪ್ಪರ್ ಮಾಲೀಕರ ಸಂಘದ ಪದಾಧಿಕಾರಿಗಳು ವಾಹನಗಳ ಬಾಡಿಗೆ ಪರಿಷ್ಕರಣೆಗೊಳಿಸಿದ್ದು ಭಾನುವಾರ ಪರಿಷ್ಕೃತ ಬಾಡಿಗೆ ದರ ಪ್ರಚಾರ ನಡೆಸಿದರು. 200ಕ್ಕೂ ಹೆಚ್ಚು ಮಂದಿ ಜೆಸಿಬಿ, ಟಿಪ್ಪರ್ ಮಾಲೀಕರು ಭಾಗಿಯಾಗಿದ್ದರು.</p>.<p>ಜೆಸಿಬಿ, ಟ್ರಾಕ್ಟರ್ ಮತ್ತು ಟಿಪ್ಪರ್ ವಾಹನಗಳ ಬಾಡಿಗೆ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಸಂಘದ ತಿಮ್ಮಾರೆಡ್ಡಿ ಕೋರಿದರು.</p>.<p>ನಿರ್ಮಾಣ ಯಂತ್ರಗಳ ಮಾರಾಟ ಬೆಲೆ, ವಾಹನ ಸಾಲದ ಮೇಲಿನ ಬಡ್ಡಿ, ನಿರ್ವಹಣೆ ವೆಚ್ಚ, ಬಿಡಿ ಭಾಗಗಳ ವೆಚ್ಚ ಡಿಸೇಲ್ ದರ ಹೆಚ್ಚಾಗಿದೆ. ಇದರಿಂದಾಗಿ ಅನಿವಾರ್ಯವಾಗಿ ಟ್ರಾಕ್ಟರ್, ಟಿಪ್ಪರ್, ಜೆಸಿಬಿ ವಾಹನಗಳ ಬಾಡಿಗೆ ದರವನ್ನು ಹೆಚ್ಚಿಸಲಾಗಿದೆ ಎಂದು ಸಂಘದ ಪುನೀತ್ ತಿಳಿಸಿದರು.</p>.<p>ದರ ಏರಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಿನ ದಿನಗಳಲ್ಲಿ 300-400 ಜೆಸಿಬಿ, ಟ್ರಾಕ್ಟರ್ ಮತ್ತು ಟಿಪ್ಪರ್ಗಳ ಮೆರವಣಿಗೆ ನಡೆಸಲು ಚಿಂತನೆ ನಡೆದಿದೆ. ಜನವರಿ ನಾಲ್ಕನೇ ವಾರದಲ್ಲಿ ರ್ಯಾಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.</p>.<p>ಸಂಘದ ಪದಾಧಿಕಾರಿಗಳಾದ ಬಾಬುರಾವ್, ವಿನೋಧ್, ಪ್ರದೀಪ್, ಯತೀಶ್, ಪುನೀತ್, ರಾಜಶೇಖರಯ್ಯ, ಕುಮಾರ್, ದರ್ಶನ್, ಶ್ರೀಧರ್ ಸರ್ಜಾಪುರ, ವಿನೋಧ್, ಸೂರಿ, ಶಿವರಾಮರೆಡ್ಡಿ, ಗೋಪಾಲಯ್ಯ, ಮಧು, ಗಿರೀಶ್, ಸೋಮಶೇಖರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ತಾಲ್ಲೂಕಿನ ಚಂದಾಪುರದಲ್ಲಿ ಬೆಂಗಳೂರು ಜೆಸಿಬಿ, ಟ್ರಾಕ್ಟರ್ ಮತ್ತು ಟಿಪ್ಪರ್ ಮಾಲೀಕರ ಸಂಘದ ಪದಾಧಿಕಾರಿಗಳು ವಾಹನಗಳ ಬಾಡಿಗೆ ಪರಿಷ್ಕರಣೆಗೊಳಿಸಿದ್ದು ಭಾನುವಾರ ಪರಿಷ್ಕೃತ ಬಾಡಿಗೆ ದರ ಪ್ರಚಾರ ನಡೆಸಿದರು. 200ಕ್ಕೂ ಹೆಚ್ಚು ಮಂದಿ ಜೆಸಿಬಿ, ಟಿಪ್ಪರ್ ಮಾಲೀಕರು ಭಾಗಿಯಾಗಿದ್ದರು.</p>.<p>ಜೆಸಿಬಿ, ಟ್ರಾಕ್ಟರ್ ಮತ್ತು ಟಿಪ್ಪರ್ ವಾಹನಗಳ ಬಾಡಿಗೆ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಸಂಘದ ತಿಮ್ಮಾರೆಡ್ಡಿ ಕೋರಿದರು.</p>.<p>ನಿರ್ಮಾಣ ಯಂತ್ರಗಳ ಮಾರಾಟ ಬೆಲೆ, ವಾಹನ ಸಾಲದ ಮೇಲಿನ ಬಡ್ಡಿ, ನಿರ್ವಹಣೆ ವೆಚ್ಚ, ಬಿಡಿ ಭಾಗಗಳ ವೆಚ್ಚ ಡಿಸೇಲ್ ದರ ಹೆಚ್ಚಾಗಿದೆ. ಇದರಿಂದಾಗಿ ಅನಿವಾರ್ಯವಾಗಿ ಟ್ರಾಕ್ಟರ್, ಟಿಪ್ಪರ್, ಜೆಸಿಬಿ ವಾಹನಗಳ ಬಾಡಿಗೆ ದರವನ್ನು ಹೆಚ್ಚಿಸಲಾಗಿದೆ ಎಂದು ಸಂಘದ ಪುನೀತ್ ತಿಳಿಸಿದರು.</p>.<p>ದರ ಏರಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಿನ ದಿನಗಳಲ್ಲಿ 300-400 ಜೆಸಿಬಿ, ಟ್ರಾಕ್ಟರ್ ಮತ್ತು ಟಿಪ್ಪರ್ಗಳ ಮೆರವಣಿಗೆ ನಡೆಸಲು ಚಿಂತನೆ ನಡೆದಿದೆ. ಜನವರಿ ನಾಲ್ಕನೇ ವಾರದಲ್ಲಿ ರ್ಯಾಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.</p>.<p>ಸಂಘದ ಪದಾಧಿಕಾರಿಗಳಾದ ಬಾಬುರಾವ್, ವಿನೋಧ್, ಪ್ರದೀಪ್, ಯತೀಶ್, ಪುನೀತ್, ರಾಜಶೇಖರಯ್ಯ, ಕುಮಾರ್, ದರ್ಶನ್, ಶ್ರೀಧರ್ ಸರ್ಜಾಪುರ, ವಿನೋಧ್, ಸೂರಿ, ಶಿವರಾಮರೆಡ್ಡಿ, ಗೋಪಾಲಯ್ಯ, ಮಧು, ಗಿರೀಶ್, ಸೋಮಶೇಖರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>