<p><strong>ವಿಜಯಪುರ (ದೇವನಹಳ್ಳಿ): </strong>ಹೋಬಳಿಯಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಪಟ್ಟಣದ ಮಾರುಕಟ್ಟೆಯಲ್ಲಿ ಭಾನುವಾರ ಜನರು ಜಮಾಯಿಸಿದ್ದರು.</p>.<p>ಹಬ್ಬದ ಒಂದು ದಿನ ಮುಂಚೆಯೇ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೂ, ಹಣ್ಣು ಹಂಪಲು, ಕಬ್ಬು, ಬಾಳೆ ಕಂಬ, ಸಿಹಿ ತಿಂಡಿಗಳು ಹಾಗೂ ಮಣ್ಣಿನಿಂದ ತಯಾರಿಸಿದ ಹಣತೆಗಳು ಖರೀದಿಯಲ್ಲಿ ಜನರು ಕಾರ್ಯನಿರತರಾಗಿದ್ದರು.</p>.<p><strong>ಮಣ್ಣಿನ ಹಣತೆಗಳಿಗೆ ಬೇಡಿಕೆ:</strong> ದೀಪಾವಳಿ ಹಬ್ಬಕ್ಕೆ ಬಗೆ ಬಗೆಯ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲಿಯೂ ಮಣ್ಣಿನ ಹಾಗೂ ಪ್ಲಾಸ್ಟಿಕ್ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಹೆಚ್ಚಿನ ಜನರು ಈ ಬಾರಿ ಮಣ್ಣಿನ ದೀಪಗಳನ್ನು ಜನ ಖರೀದಿಸುತ್ತಿದ್ದಾರೆ.</p>.<p>ದೀಪದ ಮಾದರಿಯಲ್ಲಿರುವ ಡಜನ್ ಹಣತೆಗೆ ₹100 ರಿಂದ ₹250 ವರೆಗೆ ದರವನ್ನು ನಿಗದಿ ಪಡಿಸಿದ್ದರು. ಅಲಂಕಾರಿ ವಸ್ತುಗಳಿಗೆ ಗೃಹಿಣಿಯರು ಖರೀದಿಸಲು ಆಸಕ್ತಿ ತೋರಿದರು.</p>.<p>ಪೂಜಾ ಸಾಮಗ್ರಿ ಖರೀದಿ: ದೀಪಾವಳಿಯನ್ನು ವಿವಿಧ ಸಮುದಾಯಗಳಲ್ಲಿ ತಮ್ಮದೇ ವಿಶೇಷ ಶೈಲಿಗಳಲ್ಲಿ ಆಚರಿಸಲಾಗುತ್ತದೆ. ಬಹುತೇಕರು ಹಿಂದಿನಿಂದಲೂ ಈ ಹಬ್ಬಕ್ಕೆ ನೋಮುವ ಸಂಪ್ರದಾಯ ಉಳಿಸಿಕೊಂಡಿದ್ದಾರೆ. ಇದಕ್ಕೆಂದು ಕೈಗೆ ನೋಮುದಾರ ಕಟ್ಟಿಕೊಂಡು ಆಚರಣೆಯಲ್ಲಿ ತೊಡಗುತ್ತಾರೆ. ಪೂಜೆಯ ವೇಳೆ ನೋಮುದಾರ, ಅರಿಶಿನ-ಕುಂಕುಮ, ಅಡಿಕೆ, ವೀಳ್ಯದ ಎಲೆಗಳನ್ನು ಬಾಗಿನ ರೂಪದಲ್ಲಿ ಪ್ರಧಾನವಾಗಿ ಇಡುತ್ತಾರೆ. ಹಾಗಾಗಿ ಪೂಜಾ ಸಾಮಾಗ್ರಿಗಳ ಬಳಿಯೂ ಜನರು ಖರೀದಿಸಲು ಮುಂದಾಗಿದ್ದರು.</p>.<p><strong>ಪಟಾಕಿ ಮಾರಾಟ ಜೋರು:</strong> ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಹಲವು ಸಂಘ ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೂ ಪಟ್ಟಣದಲ್ಲಿ ಪಟಾಕಿ ಎಂದಿನಂತೆ ಮಾರಾಟವಾಗುತ್ತಿದ್ದವು. ಪಟ್ಟಣದ ಜೂನಿಯರ್ ಕಾಲೇಜು ಆಟದ ಮೈದಾನದ ಎದುರು ಪಟಾಕಿ ಮಾರಾಟವಾಗುತ್ತಿದ್ದವು. </p>.<p><strong>ತಗ್ಗಿದ ಬೆಲೆ</strong> </p><p>ಹಿಂದಿನ ವರ್ಷದ ದೀಪಾವಳಿ ಹಬ್ಬಕ್ಕೆ ಹೋಲಿಸಿದರೆ ಈ ವರ್ಷ ಮಳೆಯಿಂದಾಗಿ ಹಬ್ಬದಲ್ಲಿ ಹೂವಿನ ಬೆಲೆ ಕಡಿಮೆ ಇದೆ. ತರಕಾರಿಗಳ ಬೆಲೆಯಲ್ಲೂ ಕಡಿಮೆ ಕಂಡು ಬಂದಿದೆ ಎಂದು ಪಟ್ಟಣದ ಹೂವಿನ ವ್ಯಾಪಾರಿ ವೇಣುಗೋಪಾಲ್ ತಿಳಿಸಿದರು. ಮಾರುಕಟ್ಟೆಯಲ್ಲಿ ಸೇವಂತಿಗೆ ₹120 ರಿಂದ ₹150 ಗುಲಾಬಿ ₹150 ರಿಂದ ₹200 ಚೆಂಡು ಹೂ ₹50 ರಿಂದ ₹60ಗೆ ಮಾರಾಟವಾದರೆ. ಒಂದು ಜೊತೆ ನಾನಾ ಹೂವಿನ ಹಾರಗಳು ₹100-₹1500 ಬಾಳೆಕಂಬ ಜೋಡಿಗೆ ₹60 ಬೂದುಗುಂಬಳಕಾಯಿ ಕೆ.ಜಿಗೆ ₹30 ಮಾರಾಟವಾಗುತ್ತಿದ್ದವು. ಸೇಬು ₹200 ದಾಳಿಂಬೆ ₹160 ಬಾಳೆಹಣ್ಣು ₹120 ಕಿತ್ತಲೆ ₹150 ಮಾರಾಟವಾಗುತ್ತಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ (ದೇವನಹಳ್ಳಿ): </strong>ಹೋಬಳಿಯಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಪಟ್ಟಣದ ಮಾರುಕಟ್ಟೆಯಲ್ಲಿ ಭಾನುವಾರ ಜನರು ಜಮಾಯಿಸಿದ್ದರು.</p>.<p>ಹಬ್ಬದ ಒಂದು ದಿನ ಮುಂಚೆಯೇ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೂ, ಹಣ್ಣು ಹಂಪಲು, ಕಬ್ಬು, ಬಾಳೆ ಕಂಬ, ಸಿಹಿ ತಿಂಡಿಗಳು ಹಾಗೂ ಮಣ್ಣಿನಿಂದ ತಯಾರಿಸಿದ ಹಣತೆಗಳು ಖರೀದಿಯಲ್ಲಿ ಜನರು ಕಾರ್ಯನಿರತರಾಗಿದ್ದರು.</p>.<p><strong>ಮಣ್ಣಿನ ಹಣತೆಗಳಿಗೆ ಬೇಡಿಕೆ:</strong> ದೀಪಾವಳಿ ಹಬ್ಬಕ್ಕೆ ಬಗೆ ಬಗೆಯ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲಿಯೂ ಮಣ್ಣಿನ ಹಾಗೂ ಪ್ಲಾಸ್ಟಿಕ್ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಹೆಚ್ಚಿನ ಜನರು ಈ ಬಾರಿ ಮಣ್ಣಿನ ದೀಪಗಳನ್ನು ಜನ ಖರೀದಿಸುತ್ತಿದ್ದಾರೆ.</p>.<p>ದೀಪದ ಮಾದರಿಯಲ್ಲಿರುವ ಡಜನ್ ಹಣತೆಗೆ ₹100 ರಿಂದ ₹250 ವರೆಗೆ ದರವನ್ನು ನಿಗದಿ ಪಡಿಸಿದ್ದರು. ಅಲಂಕಾರಿ ವಸ್ತುಗಳಿಗೆ ಗೃಹಿಣಿಯರು ಖರೀದಿಸಲು ಆಸಕ್ತಿ ತೋರಿದರು.</p>.<p>ಪೂಜಾ ಸಾಮಗ್ರಿ ಖರೀದಿ: ದೀಪಾವಳಿಯನ್ನು ವಿವಿಧ ಸಮುದಾಯಗಳಲ್ಲಿ ತಮ್ಮದೇ ವಿಶೇಷ ಶೈಲಿಗಳಲ್ಲಿ ಆಚರಿಸಲಾಗುತ್ತದೆ. ಬಹುತೇಕರು ಹಿಂದಿನಿಂದಲೂ ಈ ಹಬ್ಬಕ್ಕೆ ನೋಮುವ ಸಂಪ್ರದಾಯ ಉಳಿಸಿಕೊಂಡಿದ್ದಾರೆ. ಇದಕ್ಕೆಂದು ಕೈಗೆ ನೋಮುದಾರ ಕಟ್ಟಿಕೊಂಡು ಆಚರಣೆಯಲ್ಲಿ ತೊಡಗುತ್ತಾರೆ. ಪೂಜೆಯ ವೇಳೆ ನೋಮುದಾರ, ಅರಿಶಿನ-ಕುಂಕುಮ, ಅಡಿಕೆ, ವೀಳ್ಯದ ಎಲೆಗಳನ್ನು ಬಾಗಿನ ರೂಪದಲ್ಲಿ ಪ್ರಧಾನವಾಗಿ ಇಡುತ್ತಾರೆ. ಹಾಗಾಗಿ ಪೂಜಾ ಸಾಮಾಗ್ರಿಗಳ ಬಳಿಯೂ ಜನರು ಖರೀದಿಸಲು ಮುಂದಾಗಿದ್ದರು.</p>.<p><strong>ಪಟಾಕಿ ಮಾರಾಟ ಜೋರು:</strong> ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಹಲವು ಸಂಘ ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೂ ಪಟ್ಟಣದಲ್ಲಿ ಪಟಾಕಿ ಎಂದಿನಂತೆ ಮಾರಾಟವಾಗುತ್ತಿದ್ದವು. ಪಟ್ಟಣದ ಜೂನಿಯರ್ ಕಾಲೇಜು ಆಟದ ಮೈದಾನದ ಎದುರು ಪಟಾಕಿ ಮಾರಾಟವಾಗುತ್ತಿದ್ದವು. </p>.<p><strong>ತಗ್ಗಿದ ಬೆಲೆ</strong> </p><p>ಹಿಂದಿನ ವರ್ಷದ ದೀಪಾವಳಿ ಹಬ್ಬಕ್ಕೆ ಹೋಲಿಸಿದರೆ ಈ ವರ್ಷ ಮಳೆಯಿಂದಾಗಿ ಹಬ್ಬದಲ್ಲಿ ಹೂವಿನ ಬೆಲೆ ಕಡಿಮೆ ಇದೆ. ತರಕಾರಿಗಳ ಬೆಲೆಯಲ್ಲೂ ಕಡಿಮೆ ಕಂಡು ಬಂದಿದೆ ಎಂದು ಪಟ್ಟಣದ ಹೂವಿನ ವ್ಯಾಪಾರಿ ವೇಣುಗೋಪಾಲ್ ತಿಳಿಸಿದರು. ಮಾರುಕಟ್ಟೆಯಲ್ಲಿ ಸೇವಂತಿಗೆ ₹120 ರಿಂದ ₹150 ಗುಲಾಬಿ ₹150 ರಿಂದ ₹200 ಚೆಂಡು ಹೂ ₹50 ರಿಂದ ₹60ಗೆ ಮಾರಾಟವಾದರೆ. ಒಂದು ಜೊತೆ ನಾನಾ ಹೂವಿನ ಹಾರಗಳು ₹100-₹1500 ಬಾಳೆಕಂಬ ಜೋಡಿಗೆ ₹60 ಬೂದುಗುಂಬಳಕಾಯಿ ಕೆ.ಜಿಗೆ ₹30 ಮಾರಾಟವಾಗುತ್ತಿದ್ದವು. ಸೇಬು ₹200 ದಾಳಿಂಬೆ ₹160 ಬಾಳೆಹಣ್ಣು ₹120 ಕಿತ್ತಲೆ ₹150 ಮಾರಾಟವಾಗುತ್ತಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>