‘ಅನಾರೋಗ್ಯದಿಂದ ಮಗಳ ಮನೆಯಲ್ಲಿದ್ದೇನೆ. ಸರಿಯಾದ ಸಮಯಕ್ಕೆ ಪಿಂಚಣಿ ತಲುಪುತ್ತಿಲ್ಲ. ಕಚೇರಿಗೆ ಎರಡು ಬಾರಿ ಬಂದು ಪಿಂಚಣಿ ಮಂಜೂರಾಗಿರುವ ಆದೇಶಪತ್ರಗಳು, ಆಧಾರ್ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಎಲ್ಲವನ್ನು ಕೊಟ್ಟು ಹೋಗಿದ್ದೆ. ಇದುವರೆಗೂ ನನ್ನ ಖಾತೆಗೆ ಪಿಂಚಣಿ ಜಮಾ ಆಗಿಲ್ಲ. ಪುನಃ ಇವತ್ತೂ ಬಂದಿದ್ದೇನೆ’ ಎಂದು ಹೇಳಿದರು.
ಮುಖಂಡ ರಾಜಶೇಖರ್ ಮಾತನಾಡಿ ‘ತಾಲ್ಲೂಕಿನಲ್ಲಿ ಬಹುಪಾಲು ವೃದ್ಧರದ್ದು ಇದೇ ಪರಿಸ್ಥಿತಿ. ನಿಗದಿತ ಸಮಯಕ್ಕೆ ಅವರಿಗೆ ಪಿಂಚಣಿ ಲಭಿಸುತ್ತಿಲ್ಲ. ಗ್ರಾಮಲೆಕ್ಕಾಧಿಕಾರಿಗಳು ಇಂತಹವರ ಮಾಹಿತಿ ಪಡೆದು ಪಿಂಚಣಿಯುನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದರು.