ಚಿಕ್ಕೋಡಿ ತಾಲ್ಲೂಕಿನ ಅಂಬಲಜರಿ ಗ್ರಾಮದ ರಾಮಾ ಬೀರಪ್ಪ ಪೂಜೇರಿ ಅವರಿಗೆ ಸೇರಿದ ಕುರಿಗಳು ಸರ್ವಿಸ್ ರಸ್ತೆ ಮೇಲೆ ಹೊರಟಾಗ, ನಾಯಿಗೆ ಬೆದರಿ ಹೆದ್ದಾರಿ ಮೇಲೆ ಓಡಿವೆ. ಧಾರವಾಡ ಕಡೆಯಿಂದ ಬೆಳಗಾವಿಯತ್ತ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕುರಿಗಳಿಗೆ ಹಾಯ್ದಿದ್ದರಿಂದ 22 ಕುರಿಗಳು ಮೃತಪಟ್ಟಿದ್ದು, 15 ಕುರಿಗಳು ಗಾಯಗೊಂಡಿವೆ.