<p><strong>ಬೆಳಗಾವಿ: </strong>ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಪಟ್ಟಣ ಪಂಚಾಯ್ತಿಯ ತಲಾ 1 ಸ್ಥಾನ, ಗ್ರಾಮ ಪಂಚಾಯ್ತಿಯ 2 ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.</p>.<p>ಜಿಲ್ಲಾ ಪಂಚಾಯ್ತಿಯ ಹೆಬ್ಬಾಳ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಮಹಾಂತೇಶ ಮಲ್ಲಪ್ಪಾ ಮಗದುಮ್ಮ 11,290 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದರು.</p>.<p>ಇವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸತೀಶ ಶಿವಾನಂದ ಮಗದುಮ್ಮ (5,851) ಅವರನ್ನು ಪರಾಭವಗೊಳಿಸಿದರು.</p>.<p>ರಾಮದುರ್ಗ ತಾಲ್ಲೂಕು ಪಂಚಾಯ್ತಿಗೆ ಬಿಜೆಪಿಯ ಲೀಲಾವತಿ ಹಣಮಂತ ಕೋನಿನ ಆಯ್ಕೆಯಾಗಿದ್ದಾರೆ.</p>.<p>ಖಾನಾಪುರ ಪಟ್ಟಣ ಪಂಚಾಯ್ತಿಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಪ್ಪಯ್ಯ ಈರಪ್ಪ ಕೊಡೊಳ್ಳಿ ಗೆಲುವು ಸಾಧಿಸಿದ್ದಾರೆ.</p>.<p>ಸವದತ್ತಿ ತಾಲ್ಲೂಕಿನ ತೆಗ್ಗಿಹಾಳ ಗ್ರಾಮ ಪಂಚಾಯ್ತಿಯ ತೆಗ್ಗಿಹಾಳ ಕ್ಷೇತ್ರದಲ್ಲಿ ರುಕ್ಕಮ್ಮವ್ವ ಚಂದ್ರಶೇಖರ ತಿಮ್ಮನ್ನವರ ಹಾಗೂ ರಾಯಬಾಗ ತಾಲ್ಲೂಕಿನ ಪರಮಾನಂದವಾಡಿ ಗ್ರಾಮ ಪಂಚಾಯ್ತಿಯ ಪರಮಾನಂದವಾಡಿ ಕ್ಷೇತ್ರದಲ್ಲಿ ಚಿದಾನಂದ ಮಲ್ಲಪ್ಪ ಮಿಠಾರೆ ಜಯಗಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಪಟ್ಟಣ ಪಂಚಾಯ್ತಿಯ ತಲಾ 1 ಸ್ಥಾನ, ಗ್ರಾಮ ಪಂಚಾಯ್ತಿಯ 2 ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.</p>.<p>ಜಿಲ್ಲಾ ಪಂಚಾಯ್ತಿಯ ಹೆಬ್ಬಾಳ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಮಹಾಂತೇಶ ಮಲ್ಲಪ್ಪಾ ಮಗದುಮ್ಮ 11,290 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದರು.</p>.<p>ಇವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸತೀಶ ಶಿವಾನಂದ ಮಗದುಮ್ಮ (5,851) ಅವರನ್ನು ಪರಾಭವಗೊಳಿಸಿದರು.</p>.<p>ರಾಮದುರ್ಗ ತಾಲ್ಲೂಕು ಪಂಚಾಯ್ತಿಗೆ ಬಿಜೆಪಿಯ ಲೀಲಾವತಿ ಹಣಮಂತ ಕೋನಿನ ಆಯ್ಕೆಯಾಗಿದ್ದಾರೆ.</p>.<p>ಖಾನಾಪುರ ಪಟ್ಟಣ ಪಂಚಾಯ್ತಿಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಪ್ಪಯ್ಯ ಈರಪ್ಪ ಕೊಡೊಳ್ಳಿ ಗೆಲುವು ಸಾಧಿಸಿದ್ದಾರೆ.</p>.<p>ಸವದತ್ತಿ ತಾಲ್ಲೂಕಿನ ತೆಗ್ಗಿಹಾಳ ಗ್ರಾಮ ಪಂಚಾಯ್ತಿಯ ತೆಗ್ಗಿಹಾಳ ಕ್ಷೇತ್ರದಲ್ಲಿ ರುಕ್ಕಮ್ಮವ್ವ ಚಂದ್ರಶೇಖರ ತಿಮ್ಮನ್ನವರ ಹಾಗೂ ರಾಯಬಾಗ ತಾಲ್ಲೂಕಿನ ಪರಮಾನಂದವಾಡಿ ಗ್ರಾಮ ಪಂಚಾಯ್ತಿಯ ಪರಮಾನಂದವಾಡಿ ಕ್ಷೇತ್ರದಲ್ಲಿ ಚಿದಾನಂದ ಮಲ್ಲಪ್ಪ ಮಿಠಾರೆ ಜಯಗಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>