<p><strong>ಬೆಳಗಾವಿ:</strong> ‘ಪ್ರಸ್ತುತ ಸನ್ನಿವೇಶದಲ್ಲಿ ಪ್ರೀತಿ, ವಾತ್ಸಲ್ಯ ಹಾಗೂ ಗೌರವ ಸಿಗುವುದು ಓದುವುದರಿಂದ ಮಾತ್ರವೇ ಹೊರತು, ಮೊಬೈಲ್ ಗೀಳಿನಿಂದಲ್ಲ’ ಎಂದು ಸಾಂಬ್ರಾ ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್ಕುಮಾರ್ ಮೌರ್ಯ ಹೇಳಿದರು.</p>.<p>ಇಲ್ಲಿನ ಹಿಂದವಾಡಿಯ ಪ್ರೇರಣಾ ಪದವಿಪೂರ್ವ ಕಾಲೇಜಿನಲ್ಲಿ ‘ಅಭ್ಯುದಯ 2020’ ವಾರ್ಷಿಕೋತ್ಸವದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.</p>.<p>‘ಪಾಲಕರನ್ನು ಮಕ್ಕಳು ಅನುಸರಿಸುತ್ತಾರೆ. ನಮ್ಮ ನಡೆ–ನುಡಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಜೀವನಶೈಲಿ ರೂಢಿಸಿಕೊಳ್ಳುತ್ತಾರೆ. ಹೀಗಾಗಿ, ನಾವು ಅವರಿಗೆ ಆದರ್ಶವಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ವಿಜ್ಞಾನ ವಿಭಾಗದ ಪ್ರೇರಣಾ ಭಟ್ಟ, ಭಾಗ್ಯಶ್ರೀ ರಾಸಳ, ತುಷಾರ ಜಾಧವ, ವಿನಾಯಕ ಮಡಿವಾಳರ, ವಾಣಿಜ್ಯ ವಿಭಾಗದ ಬಾಲರಾಜ ಕಂದುಲಾ, ಅಭಿನವ ಸಂಗಾತಿ, ರಮಣಿ ದೇಶಪಾಂಡೆ, ವೈಷ್ಣವಿ ಅನಗೋಳಕರ ವರ್ಷದ ಅತ್ಯುತ್ತಮ ವಿದ್ಯಾರ್ಥಿ, ವಿದ್ಯಾರ್ಥಿನಿಯರೆಂದು ಪ್ರಶಸ್ತಿ ಗಳಿಸಿದರು.</p>.<p>ಸಂಪನ್ಮೂಲ ವ್ಯಕ್ತಿ ಸಾಧನಾ ಪೋಟೆ, ಸಂಸ್ಥೆಯ ಮುಖ್ಯಸ್ಥ ಗಿರೀಶ ದಂಡೆನ್ನವರ, ಅಮಿತ ವಾಗರಾಳಿ, ಪ್ರಾಂಶುಪಾಲ ವೇಣುಗೋಪಾಲ ಇದ್ದರು.</p>.<p>ದಿವ್ಯಾ ತಳವಾರ ಹಾಗೂ ಯುಕ್ತಾ ಅರಬಳ್ಳಿ ನಿರೂಪಿಸಿದರು. ಶ್ರೀಲಕ್ಷ್ಮಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಪ್ರಸ್ತುತ ಸನ್ನಿವೇಶದಲ್ಲಿ ಪ್ರೀತಿ, ವಾತ್ಸಲ್ಯ ಹಾಗೂ ಗೌರವ ಸಿಗುವುದು ಓದುವುದರಿಂದ ಮಾತ್ರವೇ ಹೊರತು, ಮೊಬೈಲ್ ಗೀಳಿನಿಂದಲ್ಲ’ ಎಂದು ಸಾಂಬ್ರಾ ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್ಕುಮಾರ್ ಮೌರ್ಯ ಹೇಳಿದರು.</p>.<p>ಇಲ್ಲಿನ ಹಿಂದವಾಡಿಯ ಪ್ರೇರಣಾ ಪದವಿಪೂರ್ವ ಕಾಲೇಜಿನಲ್ಲಿ ‘ಅಭ್ಯುದಯ 2020’ ವಾರ್ಷಿಕೋತ್ಸವದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.</p>.<p>‘ಪಾಲಕರನ್ನು ಮಕ್ಕಳು ಅನುಸರಿಸುತ್ತಾರೆ. ನಮ್ಮ ನಡೆ–ನುಡಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಜೀವನಶೈಲಿ ರೂಢಿಸಿಕೊಳ್ಳುತ್ತಾರೆ. ಹೀಗಾಗಿ, ನಾವು ಅವರಿಗೆ ಆದರ್ಶವಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ವಿಜ್ಞಾನ ವಿಭಾಗದ ಪ್ರೇರಣಾ ಭಟ್ಟ, ಭಾಗ್ಯಶ್ರೀ ರಾಸಳ, ತುಷಾರ ಜಾಧವ, ವಿನಾಯಕ ಮಡಿವಾಳರ, ವಾಣಿಜ್ಯ ವಿಭಾಗದ ಬಾಲರಾಜ ಕಂದುಲಾ, ಅಭಿನವ ಸಂಗಾತಿ, ರಮಣಿ ದೇಶಪಾಂಡೆ, ವೈಷ್ಣವಿ ಅನಗೋಳಕರ ವರ್ಷದ ಅತ್ಯುತ್ತಮ ವಿದ್ಯಾರ್ಥಿ, ವಿದ್ಯಾರ್ಥಿನಿಯರೆಂದು ಪ್ರಶಸ್ತಿ ಗಳಿಸಿದರು.</p>.<p>ಸಂಪನ್ಮೂಲ ವ್ಯಕ್ತಿ ಸಾಧನಾ ಪೋಟೆ, ಸಂಸ್ಥೆಯ ಮುಖ್ಯಸ್ಥ ಗಿರೀಶ ದಂಡೆನ್ನವರ, ಅಮಿತ ವಾಗರಾಳಿ, ಪ್ರಾಂಶುಪಾಲ ವೇಣುಗೋಪಾಲ ಇದ್ದರು.</p>.<p>ದಿವ್ಯಾ ತಳವಾರ ಹಾಗೂ ಯುಕ್ತಾ ಅರಬಳ್ಳಿ ನಿರೂಪಿಸಿದರು. ಶ್ರೀಲಕ್ಷ್ಮಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>