ಬೆಳಗಾವಿ: ಕಾಮಗಾರಿಯ ಬಿಲ್ ಮಂಜೂರು ಮಾಡಲು ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದ ನಿಪ್ಪಾಣಿ ನಗರಸಭೆಯ ಜೆಇ ಸುಭಾಷಚಂದ್ರ ಚೌಗಲಾ ಹಾಗೂ ಕಂಪ್ಯೂಟರ್ ಆಪರೇಟರ್ ಸಾಗರ ಕಾಂಬಳೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬುಧವಾರ ಬಿದ್ದಿದ್ದಾರೆ.
‘ರಾಯಬಾಗ ತಾಲ್ಲೂಕು ಹಂದಿಗುಂದದ ಗುತ್ತಿಗೆದಾರ ಪಿ. ಗಗ್ಗರಿ ನಿಪ್ಪಾಣಿ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಕಾಮಗಾರಿಯ ಬಿಲ್ ಮಂಜೂರು ಮಾಡಲು ಈ ಸರ್ಕಾರಿ ನೌಕರರು ಲಂಚ ಕೇಳಿದ್ದರು. ಶೇ 13ರಂತೆ ಕೊಡುವಂತೆ ಕೇಳಿ ಕೊನೆಗೆ ₹ 65ಸಾವಿರ ಬೇಡಿಕೆ ಇಟ್ಟಿದ್ದರು. ಈ ಕುರಿತು ಗುತ್ತಿಗೆದಾರ ದೂರು ನೀಡಿದ್ದರು. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು. ಲಂಚ ಪಡೆಯುವಾಗ ಅವರು ಸಿಕ್ಕಿಬಿದ್ದರು’ ಎಂದು ಎಸಿಬಿ ಎಸ್ಪಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಎಸ್ಪಿ ಶರಣಪ್ಪ ದೂರು ದಾಖಲಿಸಿಕೊಂಡಿದ್ದರು. ಇನ್ಸ್ಪೆಕ್ಟರ್ಗಳಾದ ಎ.ಎಸ್. ಗೊದಿಗೊಪ್ಪ, ಬಿ.ಎ. ಜಾಧವ್, ಎಂ.ಜಿ. ಹಿರೇಮಠ ಮತ್ತು ಪಿ.ಎಸ್. ಧಾರವಾಡ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.