<p><strong>ಅಕ್ಕಲಕೋಟೆ (ಮಹಾರಾಷ್ಟ್ರ):</strong> ‘ಮಹಾರಾಷ್ಟ್ರದಲ್ಲಿ ಕನ್ನಡಿಗರು ಹೆಚ್ಚಾಗಿರುವ ಪ್ರದೇಶದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಕನ್ನಡಿಗರು ನಿರಾಶೆಯಾಗುವ ಅಗತ್ಯವಿಲ್ಲ. ನಿಮ್ಮ ಬೆನ್ನಿಗೆ ಪ್ರಾಧಿಕಾರವು ಗಟ್ಟಿಯಾಗಿ ಸದಾ ನಿಲ್ಲಲಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.</p>.<p>ಅಕ್ಕಲಕೋಟೆ ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಕನ್ನಡ ಭವನ ಕಾಮಗಾರಿಯನ್ನು ಗುರುವಾರ ವೀಕ್ಷಣೆ ಮಾಡಿದ ನಂತರ, ಆದರ್ಶ ಕನ್ನಡ ಬಳಗವು ಆಯೋಜಿಸಿದ ‘ಮಹಾರಾಷ್ಟ್ರ ಕನ್ನಡಿಗರ ಏಳಿಗೆ’ ಚರ್ಚಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.</p>.<p>‘ಪ್ರಾಧಿಕಾರವು ಹಲವು ವರ್ಷಗಳಿಂದ ಗಡಿ ಭಾಗದ ಕನ್ನಡ ಪ್ರದೇಶಗಳ ಉನ್ನತೀಕರಣಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಆದರೆ, ಇದಕ್ಕೆ ಅನುದಾನದ ಅವಶ್ಯಕತೆ ಇದೆ. ಸದ್ಯಕ್ಕೆ ಇತಿಮಿತಿಯಲ್ಲಿ ಕೆಲಸಗಳನ್ನು ಸದ್ಯ ನಡೆಸಬೇಕಾಗಿದೆ’ ಎಂದರು.</p>.<p>‘ಮಾರ್ಚ್ ತಿಂಗಳ ಕೊನೆಯವರೆಗೆ ಅಕ್ಕಲಕೋಟೆಯ ಕನ್ನಡ ಭವನ ಕಾಮಗಾರಿ ಪೂರ್ಣಗೊಳ್ಳಬೇಕು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಂದು ಈ ಭವನದ ಉದ್ಘಾಟನೆ ಮಾಡಲಿದ್ದಾರೆ’ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ತೋಳನೂರು ಮಠದ ಚನ್ನಮಲ್ಲ ಸ್ವಾಮೀಜಿ, ‘ಈ ಭಾಗದಲ್ಲಿ ಕನ್ನಡ ಪ್ರತಿಯೊಬ್ಬರ ಮನೆಯ ಮಾತಾಗಿದೆ. ಇಲ್ಲಿನ ಕನ್ನಡ ಶಾಲೆಗಳಿಗೆ, ಸಂಘ–ಸಂಸ್ಥೆಗಳಿಗೆ ಪ್ರಾಧಿಕಾರವು ಹೆಚ್ಚಿನ ಅನುದಾನ ನೀಡಬೇಕು’ ಎಂದು ಹೇಳಿದರು.</p>.<p>ಸಾಹಿತಿಗಳಾದ ಮಧುಮಾಲ ನಿಗಾಡೆ, ಪ್ರಕಾಶ್ ಮತ್ತಿಹಳ್ಳಿ, ಕಾರ್ಯನಿರ್ವಾಹಕ ಎಂಜಿನಿಯರ್ ಲಕ್ಷ್ಮಿಕಾಂತ ಬಿರಾದಾರ, ಸೋಮಶೇಖರ ಜಮಶೆಟ್ಟಿ, ಮಲಿಕಜಾನ್ ಶೇಖ್, ಸುರೇಶ ಶೆಟಗಾರ ಹಾಗೂ ಸಿದರಾಯ್ ಬಿರಾದಾರ್ ಮಾತನಾಡಿದರು.</p>.<p>ಚರ್ಚಾ ಕೂಟದ ಯಶಸ್ಸಿಗೆ ಬಸವರಾಜ ಧನಶೆಟ್ಟಿ, ಮಹೇಶ ಮೇತ್ರಿ, ಗುರುಬಸವ ವಗ್ಗೋಲಿ, ಚಿದಾನಂದ ಮಠಪತಿ, ಶಾಂತಮಲ್ಲಯ್ಯ ಸ್ವಾಮಿ ಹಾಗೂ ಪ್ರಶಾಂತ್ ಬಿರಾದಾರ ಶ್ರಮಿಸಿದರು.</p>.<div><blockquote>ಅಕ್ಕಲಕೋಟೆ ಜತ್ತ ದಕ್ಷಿಣ ಸೊಲ್ಲಾಪುರ ಹಾಗೂ ಗಡಹಿಂಗ್ಲಜ್ ತಾಲ್ಲೂಕುಗಳು ಗಡಿನಾಡು ಆಗಿವೆ. ಆದರೆ ಸೌಕರ್ಯಗಳು ಮರೀಚಿಕೆಯಾಗಿವೆ </blockquote><span class="attribution">ಮಲಿಕಜಾನ್ ಶೇಖ್ ಅಧ್ಯಕ್ಷ ಆದರ್ಶ ಕನ್ನಡ ಬಳಗ</span></div>.<div><blockquote>ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ವಿತರಿಸಿದ ಉಚಿತ ಕೈಪಿಡಿ ಆಶಾದಾಯಕ. ಆದರೆ ಮೂಲಸೌಕರ್ಯಗಳಿಗೂ ಆದ್ಯತೆ ನೀಡಬೇಕು </blockquote><span class="attribution">ಸೋಮಶೇಖರ್ ಜಮಶೆಟ್ಟಿ ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಕ್ಕಲಕೋಟೆ (ಮಹಾರಾಷ್ಟ್ರ):</strong> ‘ಮಹಾರಾಷ್ಟ್ರದಲ್ಲಿ ಕನ್ನಡಿಗರು ಹೆಚ್ಚಾಗಿರುವ ಪ್ರದೇಶದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಕನ್ನಡಿಗರು ನಿರಾಶೆಯಾಗುವ ಅಗತ್ಯವಿಲ್ಲ. ನಿಮ್ಮ ಬೆನ್ನಿಗೆ ಪ್ರಾಧಿಕಾರವು ಗಟ್ಟಿಯಾಗಿ ಸದಾ ನಿಲ್ಲಲಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.</p>.<p>ಅಕ್ಕಲಕೋಟೆ ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಕನ್ನಡ ಭವನ ಕಾಮಗಾರಿಯನ್ನು ಗುರುವಾರ ವೀಕ್ಷಣೆ ಮಾಡಿದ ನಂತರ, ಆದರ್ಶ ಕನ್ನಡ ಬಳಗವು ಆಯೋಜಿಸಿದ ‘ಮಹಾರಾಷ್ಟ್ರ ಕನ್ನಡಿಗರ ಏಳಿಗೆ’ ಚರ್ಚಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.</p>.<p>‘ಪ್ರಾಧಿಕಾರವು ಹಲವು ವರ್ಷಗಳಿಂದ ಗಡಿ ಭಾಗದ ಕನ್ನಡ ಪ್ರದೇಶಗಳ ಉನ್ನತೀಕರಣಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಆದರೆ, ಇದಕ್ಕೆ ಅನುದಾನದ ಅವಶ್ಯಕತೆ ಇದೆ. ಸದ್ಯಕ್ಕೆ ಇತಿಮಿತಿಯಲ್ಲಿ ಕೆಲಸಗಳನ್ನು ಸದ್ಯ ನಡೆಸಬೇಕಾಗಿದೆ’ ಎಂದರು.</p>.<p>‘ಮಾರ್ಚ್ ತಿಂಗಳ ಕೊನೆಯವರೆಗೆ ಅಕ್ಕಲಕೋಟೆಯ ಕನ್ನಡ ಭವನ ಕಾಮಗಾರಿ ಪೂರ್ಣಗೊಳ್ಳಬೇಕು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಂದು ಈ ಭವನದ ಉದ್ಘಾಟನೆ ಮಾಡಲಿದ್ದಾರೆ’ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ತೋಳನೂರು ಮಠದ ಚನ್ನಮಲ್ಲ ಸ್ವಾಮೀಜಿ, ‘ಈ ಭಾಗದಲ್ಲಿ ಕನ್ನಡ ಪ್ರತಿಯೊಬ್ಬರ ಮನೆಯ ಮಾತಾಗಿದೆ. ಇಲ್ಲಿನ ಕನ್ನಡ ಶಾಲೆಗಳಿಗೆ, ಸಂಘ–ಸಂಸ್ಥೆಗಳಿಗೆ ಪ್ರಾಧಿಕಾರವು ಹೆಚ್ಚಿನ ಅನುದಾನ ನೀಡಬೇಕು’ ಎಂದು ಹೇಳಿದರು.</p>.<p>ಸಾಹಿತಿಗಳಾದ ಮಧುಮಾಲ ನಿಗಾಡೆ, ಪ್ರಕಾಶ್ ಮತ್ತಿಹಳ್ಳಿ, ಕಾರ್ಯನಿರ್ವಾಹಕ ಎಂಜಿನಿಯರ್ ಲಕ್ಷ್ಮಿಕಾಂತ ಬಿರಾದಾರ, ಸೋಮಶೇಖರ ಜಮಶೆಟ್ಟಿ, ಮಲಿಕಜಾನ್ ಶೇಖ್, ಸುರೇಶ ಶೆಟಗಾರ ಹಾಗೂ ಸಿದರಾಯ್ ಬಿರಾದಾರ್ ಮಾತನಾಡಿದರು.</p>.<p>ಚರ್ಚಾ ಕೂಟದ ಯಶಸ್ಸಿಗೆ ಬಸವರಾಜ ಧನಶೆಟ್ಟಿ, ಮಹೇಶ ಮೇತ್ರಿ, ಗುರುಬಸವ ವಗ್ಗೋಲಿ, ಚಿದಾನಂದ ಮಠಪತಿ, ಶಾಂತಮಲ್ಲಯ್ಯ ಸ್ವಾಮಿ ಹಾಗೂ ಪ್ರಶಾಂತ್ ಬಿರಾದಾರ ಶ್ರಮಿಸಿದರು.</p>.<div><blockquote>ಅಕ್ಕಲಕೋಟೆ ಜತ್ತ ದಕ್ಷಿಣ ಸೊಲ್ಲಾಪುರ ಹಾಗೂ ಗಡಹಿಂಗ್ಲಜ್ ತಾಲ್ಲೂಕುಗಳು ಗಡಿನಾಡು ಆಗಿವೆ. ಆದರೆ ಸೌಕರ್ಯಗಳು ಮರೀಚಿಕೆಯಾಗಿವೆ </blockquote><span class="attribution">ಮಲಿಕಜಾನ್ ಶೇಖ್ ಅಧ್ಯಕ್ಷ ಆದರ್ಶ ಕನ್ನಡ ಬಳಗ</span></div>.<div><blockquote>ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ವಿತರಿಸಿದ ಉಚಿತ ಕೈಪಿಡಿ ಆಶಾದಾಯಕ. ಆದರೆ ಮೂಲಸೌಕರ್ಯಗಳಿಗೂ ಆದ್ಯತೆ ನೀಡಬೇಕು </blockquote><span class="attribution">ಸೋಮಶೇಖರ್ ಜಮಶೆಟ್ಟಿ ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>