<p><strong>ಅಥಣಿ:</strong> ಅಥಣಿ ಮತ್ತು ಕಾಗವಾಡ ಮತಕ್ಷೇತ್ರಗಳ ರೈತರ ಜೀವನಾಡಿ ಆಗಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಲ್ಲಿನ ರೈತರ ಮೇಲಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳ ಕುಮ್ಮಕ್ಕಿನಿಂದ ಬೇರೆ ತಾಲೂಕಿನವರು ಈ ಕಾರ್ಖಾನೆಯ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಹುನ್ನಾರ ನಡೆಸುತ್ತಿದ್ದಾರೆ. ಮತಕ್ಷೇತ್ರದ ಪ್ರಜ್ಞಾವಂತ ರೈತರು ಇದಕ್ಕೆ ಅವಕಾಶ ಮಾಡಿಕೊಡದೆ ನೀವೇ ಕಟ್ಟಿದ ಈ ಕಾರ್ಖಾನೆಯ ಬೆಳವಣಿಗೆಗಾಗಿ ತಾಲೂಕಿನ ರೈತರೇ ಆಡಳಿತ ನಡೆಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ರೈತರಿಗೆ ಸಲಹೆ ನೀಡಿದರು.</p>.<p>ಅಥಣಿ ಪಟ್ಟಣದ ರಾಯಲ್ ಸುಭಾಂಗಣದಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಕಾರ್ಖಾನೆಯ ಶೇರು ಸದಸ್ಯರನ್ನು ಮತ್ತು ಕಬ್ಬು ಬೆಳೆಗಾರರನ್ನು ಉದ್ದೇಶಿಸಿ ಮಾತನಾಡಿದರು.</p>.<p>ರಾಜ್ಯದಲ್ಲಿ ಬೆರಳಣಿಕೆಯಷ್ಟು ಮಾತ್ರ ಸಹಕಾರಿ ಸಕ್ಕರೆ ಕಾರ್ಖಾನೆಗಳಿವೆ. ಅವುಗಳನ್ನು ಉಳಿಸಿ ಬೆಳೆಸಬೇಕಾದದ್ದು, ಸರ್ಕಾರ ಮತ್ತು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳಲ್ಲಿ ನಡೆಯುವ ಮೋಸದ ದಂಧೆ ತಡೆಗಟ್ಟುವಂತೆ ಸದನದಲ್ಲಿ ಅನೇಕ ಬಾರಿ ಮಾತನಾಡಿದ್ದೇನೆ. ಸರ್ಕಾರವೇ ಕಾರ್ಖಾನೆಯ ಆವರಣದಲ್ಲಿ ತೂಕದ ಯಂತ್ರಗಳನ್ನು ಅಳವಡಿಸಿ ರೈತರಿಗೆ ಆಗುವ ಮೋಸವನ್ನು ತಡೆಗಟ್ಟುವವರಿಗೆ ನನ್ನ ಹೋರಾಟ ನಿರಂತರವಾಗಿರುತ್ತದೆ. ಡಿಸೆಂಬರ್ ನಲ್ಲಿ ನಡೆಯುವ ಬೆಳಗಾವಿ ಚಳಿಗಾಳಿ ಅಧಿವೇಶನದಲ್ಲಿ ರೈತರ ಬೆಂಬಲದೊಂದಿಗೆ ಉಗ್ರ ಹೋರಾಟ ನಡೆಸುವ ಮೂಲಕ ಖಾಸಗಿ ಕಾರ್ಖಾನೆಯ ಮೋಸಗಾರರ ಹೆಡೆಮುರಿ ಕಟ್ಟುವ ಕೆಲಸವನ್ನು ಮಾಡುತ್ತೇನೆ ಎಂದು ಗುಡುಗಿದರು.</p>.<p>ಕಾರ್ಖಾನೆಯಿಂದ ನಮಗೆ ರಾಜಕೀಯ ನಷ್ಟ: ನಾನು ಸಹಕಾರಿ ಸಂಘದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ, ರಾಜ್ಯ ಅಪೇಕ್ಷೆ ಬ್ಯಾಂಕಿನ ನಿರ್ದೇಶಕನಾಗಿ ಈ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಗತಿಗಾಗಿ ಆರ್ಥಿಕ ನೆರವು ಒದಗಿಸುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ ಅನೇಕ ರೈತರು ಮತ್ತು ಕೆಲ ರೈತ ಮುಖಂಡರು ಇಲ್ಲಸಲ್ಲದ ಮತ್ತು ನಿರಾಧಾರ ಆರೋಪಗಳನ್ನು ಮಾಡುತ್ತಾರೆ. ಅವುಗಳನ್ನ ಕೇಳಿ ಸ್ವಲ್ಪ ಮನಸ್ಸಿಗೆ ನೋವಾಗುತ್ತದೆ. ಆರೋಪ ಸತ್ಯಕ್ಕೆ ಸಮೀಪ ಇರಬೇಕು, ಜನರಿಗೆ ನಂಬಿಕೆ ಬರುವಂತಿರಬೇಕು. ಗಾಳಿಯಲ್ಲಿ ಗುಂಡು ಹಾರಿಸಿದಂತೆ ನಿರಾಧಾರ ಆರೋಪಗಳನ್ನು ಮಾಡಿ ರಾಜಕೀಯ ಲಾಭ ಪಡೆಯುವ ಕುತಂತ್ರ ವ್ಯವಸ್ಥೆ ನಡೆಯುತ್ತಿದೆ. ಈ ಕಾರ್ಖಾನೆಯಿಂದ ನನಗೆ ಮತ್ತು ರಾಜು ಕಾಗೆ ಯವರಿಗೆ ಯಾವುದೇ ರಾಜಕೀಯ ಲಾಭ ಇಲ್ಲ. ರೈತರು ಅನೇಕ ಕಾರಣಗಳಿಂದ ಕಬ್ಬು ಸುಟ್ಟು ಹೋದಾಗ ಕಾರ್ಖಾನೆ ಯ ಆಡಳಿತದವರು ಅಂತಹ ಕಬ್ಬವನ್ನು ತೆಗೆದುಕೊಳ್ಳದೆ ಇರುವುದರಿಂದ ನಾವು ಅಂತ ರೈತರ ಕೆಂಗಣ್ಣಿಗೆ ಗುರಿಯಾಗಿದ್ದೇವೆ ಎಂದರು</p>.<p>ಇಲ್ಲಿಯವರೆಗೆ ಕಾರ್ಖಾನೆ ಆಡಳಿತ ಮಂಡಳಿಯವರು ರೈತರೊಂದಿಗೆ ನಡೆದುಕೊಂಡಿರುವ ರೀತಿ ತಪ್ಪಾಗಿದ್ದರೆ, ಅವರ ಪರವಾಗಿ ನಾನು ತಾಲೂಕಿನ ಎಲ್ಲ ರೈತರಲ್ಲಿ ಕ್ಷಮೆ ಕೇಳುತ್ತೇನೆ. ಮುಂಬರುವ ದಿನಗಳಲ್ಲಿ ನಾನು ಮತ್ತು ರಾಜು ಕಾಗೆ ಇಬ್ಬರು ಶಾಸಕರು ಸೇರಿದಂತೆ ಆಡಳಿತ ಮಂಡಳಿಯ ಜೊತೆಗೆ ಸಲಹಾ ಸಮಿತಿಯನ್ನು ರಚಿಸುತ್ತೇವೆ ಎಂದು ಹೇಳಿದರು.</p>.<p>ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, 2007 ರಿಂದ ನಾನು ಅಧ್ಯಕ್ಷನಾಗಿ ಸಲ್ಲಿಸುತ್ತಿದ್ದೇನೆ. 2018 -19 ನೇ ಸಾಲಿನಲ್ಲಿ ಇಬ್ಬರು ಶಾಸಕರು ರೈತರಿಗೆ ನೀಡಿದ ಭರವಸೆಯಂತೆ ಪ್ರತಿ ಟನ್ ಕಬ್ಬಿಗೆ ದೇಶದಲ್ಲಿ ಅತಿ ಹೆಚ್ಚು ಅಂದರೆ 2900 /-ರೂ. ನೀಡಿದ್ದೇವೆ. ಈ ಅವಧಿಯಲ್ಲಿ ಯಾವ ಕಾರ್ಖಾನೆಗಳು ಈ ದರವನ್ನು ನೀಡಲಿಲ್ಲ. ಆ ವರ್ಷದಿಂದ ನಮ್ಮ ಕಾರ್ಖಾನೆ ಸ್ವಲ್ಪ ನಷ್ಟವನ್ನು. ಅನುಭವಿಸಿದೆ. ಕಳೆದ ಎರಡು ವರ್ಷಗಳಿಂದ ರೈತರು ಕೂಡ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಕಾರ್ಖಾನೆಗೆ ಕಳುಹಿಸದೆ ಇರುವುದರಿಂದ ಇಂದು ₹34 ಕೋಟಿ ನಷ್ಟ ಅನುಭವಿಸುವಂತಾಗಿದೆ. ಈ ನಷ್ಟವನ್ನು ಮುಂಬರುವ ದಿನಗಳಲ್ಲಿ ಸರಿದೂಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.</p>.<p>ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ರಾಜ್ಯದಲ್ಲಿ ಅನೇಕ ಖಾಸಗಿ ಕಾರ್ಖಾನೆಗಳಿಗಿಂತ ಹೆಚ್ಚಿನ ದರ ನೀಡಿದ ಶ್ರೇಯಸ್ಸು ಕೃಷ್ಣ ಸಹಕಾರಿ ಕಾರ್ಖಾನೆಗೆ ಸಲ್ಲುತ್ತದೆ. ಇಷ್ಟು ದರ ನೀಡಲು ಸಾಧ್ಯವಾಗದೆ ಅನೇಕ ಖಾಸಗಿ ಕಾರ್ಖಾನೆಗಳ ನಮ್ಮ ಕಾರ್ಖಾನೆಗೆ ಬರುವ ಕಬ್ಬನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಎರಡು ವರ್ಷಗಳಿಂದ ನಷ್ಟ ಅನುಭವಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ನಷ್ಟವನ್ನು ಸರಿದೂಗಿಸಿ ಉತ್ತಮ ಆಡಳಿತ ನೀಡಲು ಪ್ರಾಮಾಣಿಕ ಮತ್ತು ಪಾರದರ್ಶಕ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಬೆಂಬಲ ಸೂಚಿಸಬೇಕೆಂದು ರೈತರಲ್ಲಿ ಮನವಿ ಮಾಡಿದರು.</p>.<p>ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕರಾದ ಗುರುಬಸು ತೇವರಮನಿ, ಶಾಂತಿನಾಥ ನಂದೇಶ್ವರ, ರುಕ್ಮೀಣಿ ಕುಲಕರ್ಣಿ, ರಮೇಶ ಪಟ್ಟಣ, ಸೌರಭ ಪಾಟೀಲ, ಸುನಂದಾ ನಾಯಿಕ, ಸಿದ್ರಾಯ ನಾಯಿಕ, ಮಲ್ಲಿಕಾರ್ಜುನ ಗೋಟಖಿಂಡಿ, ಹಣಮಂತ ಜಗದೇವ, ಪ್ರಲ್ಹಾದ ಪಾಟೀಲ, ವಿಶ್ವನಾಥ ಪಾಟೀಲ, ರೈತ ಮುಖಂಡರಾದ ಶೀತಲ ಪಾಟೀಲ, ಸಂಜಯ್ ಪಾಟೀಲ, ಸಿ ಎಸ್ ನೇಮಗೌಡ, ಎ ಎಂ ಕೊಬ್ಬರಿ, ಶ್ಯಾಮ್ ಪೂಜಾರಿ, ಅನಂತ ಬಸರಿಕೋಡಿ, ಶ್ರೀಶೈಲ ನಾರಗೊಂಡ ಸೇರಿದಂತೆ ಅನೇಕ ರೈತ ಮುಖಂಡರು, ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.</p>
<p><strong>ಅಥಣಿ:</strong> ಅಥಣಿ ಮತ್ತು ಕಾಗವಾಡ ಮತಕ್ಷೇತ್ರಗಳ ರೈತರ ಜೀವನಾಡಿ ಆಗಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಲ್ಲಿನ ರೈತರ ಮೇಲಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳ ಕುಮ್ಮಕ್ಕಿನಿಂದ ಬೇರೆ ತಾಲೂಕಿನವರು ಈ ಕಾರ್ಖಾನೆಯ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಹುನ್ನಾರ ನಡೆಸುತ್ತಿದ್ದಾರೆ. ಮತಕ್ಷೇತ್ರದ ಪ್ರಜ್ಞಾವಂತ ರೈತರು ಇದಕ್ಕೆ ಅವಕಾಶ ಮಾಡಿಕೊಡದೆ ನೀವೇ ಕಟ್ಟಿದ ಈ ಕಾರ್ಖಾನೆಯ ಬೆಳವಣಿಗೆಗಾಗಿ ತಾಲೂಕಿನ ರೈತರೇ ಆಡಳಿತ ನಡೆಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ರೈತರಿಗೆ ಸಲಹೆ ನೀಡಿದರು.</p>.<p>ಅಥಣಿ ಪಟ್ಟಣದ ರಾಯಲ್ ಸುಭಾಂಗಣದಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಕಾರ್ಖಾನೆಯ ಶೇರು ಸದಸ್ಯರನ್ನು ಮತ್ತು ಕಬ್ಬು ಬೆಳೆಗಾರರನ್ನು ಉದ್ದೇಶಿಸಿ ಮಾತನಾಡಿದರು.</p>.<p>ರಾಜ್ಯದಲ್ಲಿ ಬೆರಳಣಿಕೆಯಷ್ಟು ಮಾತ್ರ ಸಹಕಾರಿ ಸಕ್ಕರೆ ಕಾರ್ಖಾನೆಗಳಿವೆ. ಅವುಗಳನ್ನು ಉಳಿಸಿ ಬೆಳೆಸಬೇಕಾದದ್ದು, ಸರ್ಕಾರ ಮತ್ತು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳಲ್ಲಿ ನಡೆಯುವ ಮೋಸದ ದಂಧೆ ತಡೆಗಟ್ಟುವಂತೆ ಸದನದಲ್ಲಿ ಅನೇಕ ಬಾರಿ ಮಾತನಾಡಿದ್ದೇನೆ. ಸರ್ಕಾರವೇ ಕಾರ್ಖಾನೆಯ ಆವರಣದಲ್ಲಿ ತೂಕದ ಯಂತ್ರಗಳನ್ನು ಅಳವಡಿಸಿ ರೈತರಿಗೆ ಆಗುವ ಮೋಸವನ್ನು ತಡೆಗಟ್ಟುವವರಿಗೆ ನನ್ನ ಹೋರಾಟ ನಿರಂತರವಾಗಿರುತ್ತದೆ. ಡಿಸೆಂಬರ್ ನಲ್ಲಿ ನಡೆಯುವ ಬೆಳಗಾವಿ ಚಳಿಗಾಳಿ ಅಧಿವೇಶನದಲ್ಲಿ ರೈತರ ಬೆಂಬಲದೊಂದಿಗೆ ಉಗ್ರ ಹೋರಾಟ ನಡೆಸುವ ಮೂಲಕ ಖಾಸಗಿ ಕಾರ್ಖಾನೆಯ ಮೋಸಗಾರರ ಹೆಡೆಮುರಿ ಕಟ್ಟುವ ಕೆಲಸವನ್ನು ಮಾಡುತ್ತೇನೆ ಎಂದು ಗುಡುಗಿದರು.</p>.<p>ಕಾರ್ಖಾನೆಯಿಂದ ನಮಗೆ ರಾಜಕೀಯ ನಷ್ಟ: ನಾನು ಸಹಕಾರಿ ಸಂಘದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ, ರಾಜ್ಯ ಅಪೇಕ್ಷೆ ಬ್ಯಾಂಕಿನ ನಿರ್ದೇಶಕನಾಗಿ ಈ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಗತಿಗಾಗಿ ಆರ್ಥಿಕ ನೆರವು ಒದಗಿಸುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ ಅನೇಕ ರೈತರು ಮತ್ತು ಕೆಲ ರೈತ ಮುಖಂಡರು ಇಲ್ಲಸಲ್ಲದ ಮತ್ತು ನಿರಾಧಾರ ಆರೋಪಗಳನ್ನು ಮಾಡುತ್ತಾರೆ. ಅವುಗಳನ್ನ ಕೇಳಿ ಸ್ವಲ್ಪ ಮನಸ್ಸಿಗೆ ನೋವಾಗುತ್ತದೆ. ಆರೋಪ ಸತ್ಯಕ್ಕೆ ಸಮೀಪ ಇರಬೇಕು, ಜನರಿಗೆ ನಂಬಿಕೆ ಬರುವಂತಿರಬೇಕು. ಗಾಳಿಯಲ್ಲಿ ಗುಂಡು ಹಾರಿಸಿದಂತೆ ನಿರಾಧಾರ ಆರೋಪಗಳನ್ನು ಮಾಡಿ ರಾಜಕೀಯ ಲಾಭ ಪಡೆಯುವ ಕುತಂತ್ರ ವ್ಯವಸ್ಥೆ ನಡೆಯುತ್ತಿದೆ. ಈ ಕಾರ್ಖಾನೆಯಿಂದ ನನಗೆ ಮತ್ತು ರಾಜು ಕಾಗೆ ಯವರಿಗೆ ಯಾವುದೇ ರಾಜಕೀಯ ಲಾಭ ಇಲ್ಲ. ರೈತರು ಅನೇಕ ಕಾರಣಗಳಿಂದ ಕಬ್ಬು ಸುಟ್ಟು ಹೋದಾಗ ಕಾರ್ಖಾನೆ ಯ ಆಡಳಿತದವರು ಅಂತಹ ಕಬ್ಬವನ್ನು ತೆಗೆದುಕೊಳ್ಳದೆ ಇರುವುದರಿಂದ ನಾವು ಅಂತ ರೈತರ ಕೆಂಗಣ್ಣಿಗೆ ಗುರಿಯಾಗಿದ್ದೇವೆ ಎಂದರು</p>.<p>ಇಲ್ಲಿಯವರೆಗೆ ಕಾರ್ಖಾನೆ ಆಡಳಿತ ಮಂಡಳಿಯವರು ರೈತರೊಂದಿಗೆ ನಡೆದುಕೊಂಡಿರುವ ರೀತಿ ತಪ್ಪಾಗಿದ್ದರೆ, ಅವರ ಪರವಾಗಿ ನಾನು ತಾಲೂಕಿನ ಎಲ್ಲ ರೈತರಲ್ಲಿ ಕ್ಷಮೆ ಕೇಳುತ್ತೇನೆ. ಮುಂಬರುವ ದಿನಗಳಲ್ಲಿ ನಾನು ಮತ್ತು ರಾಜು ಕಾಗೆ ಇಬ್ಬರು ಶಾಸಕರು ಸೇರಿದಂತೆ ಆಡಳಿತ ಮಂಡಳಿಯ ಜೊತೆಗೆ ಸಲಹಾ ಸಮಿತಿಯನ್ನು ರಚಿಸುತ್ತೇವೆ ಎಂದು ಹೇಳಿದರು.</p>.<p>ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, 2007 ರಿಂದ ನಾನು ಅಧ್ಯಕ್ಷನಾಗಿ ಸಲ್ಲಿಸುತ್ತಿದ್ದೇನೆ. 2018 -19 ನೇ ಸಾಲಿನಲ್ಲಿ ಇಬ್ಬರು ಶಾಸಕರು ರೈತರಿಗೆ ನೀಡಿದ ಭರವಸೆಯಂತೆ ಪ್ರತಿ ಟನ್ ಕಬ್ಬಿಗೆ ದೇಶದಲ್ಲಿ ಅತಿ ಹೆಚ್ಚು ಅಂದರೆ 2900 /-ರೂ. ನೀಡಿದ್ದೇವೆ. ಈ ಅವಧಿಯಲ್ಲಿ ಯಾವ ಕಾರ್ಖಾನೆಗಳು ಈ ದರವನ್ನು ನೀಡಲಿಲ್ಲ. ಆ ವರ್ಷದಿಂದ ನಮ್ಮ ಕಾರ್ಖಾನೆ ಸ್ವಲ್ಪ ನಷ್ಟವನ್ನು. ಅನುಭವಿಸಿದೆ. ಕಳೆದ ಎರಡು ವರ್ಷಗಳಿಂದ ರೈತರು ಕೂಡ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಕಾರ್ಖಾನೆಗೆ ಕಳುಹಿಸದೆ ಇರುವುದರಿಂದ ಇಂದು ₹34 ಕೋಟಿ ನಷ್ಟ ಅನುಭವಿಸುವಂತಾಗಿದೆ. ಈ ನಷ್ಟವನ್ನು ಮುಂಬರುವ ದಿನಗಳಲ್ಲಿ ಸರಿದೂಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.</p>.<p>ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ರಾಜ್ಯದಲ್ಲಿ ಅನೇಕ ಖಾಸಗಿ ಕಾರ್ಖಾನೆಗಳಿಗಿಂತ ಹೆಚ್ಚಿನ ದರ ನೀಡಿದ ಶ್ರೇಯಸ್ಸು ಕೃಷ್ಣ ಸಹಕಾರಿ ಕಾರ್ಖಾನೆಗೆ ಸಲ್ಲುತ್ತದೆ. ಇಷ್ಟು ದರ ನೀಡಲು ಸಾಧ್ಯವಾಗದೆ ಅನೇಕ ಖಾಸಗಿ ಕಾರ್ಖಾನೆಗಳ ನಮ್ಮ ಕಾರ್ಖಾನೆಗೆ ಬರುವ ಕಬ್ಬನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಎರಡು ವರ್ಷಗಳಿಂದ ನಷ್ಟ ಅನುಭವಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ನಷ್ಟವನ್ನು ಸರಿದೂಗಿಸಿ ಉತ್ತಮ ಆಡಳಿತ ನೀಡಲು ಪ್ರಾಮಾಣಿಕ ಮತ್ತು ಪಾರದರ್ಶಕ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಬೆಂಬಲ ಸೂಚಿಸಬೇಕೆಂದು ರೈತರಲ್ಲಿ ಮನವಿ ಮಾಡಿದರು.</p>.<p>ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕರಾದ ಗುರುಬಸು ತೇವರಮನಿ, ಶಾಂತಿನಾಥ ನಂದೇಶ್ವರ, ರುಕ್ಮೀಣಿ ಕುಲಕರ್ಣಿ, ರಮೇಶ ಪಟ್ಟಣ, ಸೌರಭ ಪಾಟೀಲ, ಸುನಂದಾ ನಾಯಿಕ, ಸಿದ್ರಾಯ ನಾಯಿಕ, ಮಲ್ಲಿಕಾರ್ಜುನ ಗೋಟಖಿಂಡಿ, ಹಣಮಂತ ಜಗದೇವ, ಪ್ರಲ್ಹಾದ ಪಾಟೀಲ, ವಿಶ್ವನಾಥ ಪಾಟೀಲ, ರೈತ ಮುಖಂಡರಾದ ಶೀತಲ ಪಾಟೀಲ, ಸಂಜಯ್ ಪಾಟೀಲ, ಸಿ ಎಸ್ ನೇಮಗೌಡ, ಎ ಎಂ ಕೊಬ್ಬರಿ, ಶ್ಯಾಮ್ ಪೂಜಾರಿ, ಅನಂತ ಬಸರಿಕೋಡಿ, ಶ್ರೀಶೈಲ ನಾರಗೊಂಡ ಸೇರಿದಂತೆ ಅನೇಕ ರೈತ ಮುಖಂಡರು, ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.</p>