‘ತೆರಿಗೆ ಪಾವತಿಸುವ ನಮಗೆ, ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಆರ್ಥಿಕ ನೆರವು ಸಿಕ್ಕಿಲ್ಲ. ತೆರಿಗೆ ಶುಲ್ಕ ಹಾಗೂ ವಿದ್ಯುತ್ ಬಿಲ್ ಪಾವತಿಯಿಂದಲೂ ವಿನಾಯಿತಿ ದೊರೆತಿಲ್ಲ. ಪುಸ್ತಕ ಹಾಗೂ ಸ್ಟೇಷನರಿಗಳು ಅವಶ್ಯ ಸಾಮಗ್ರಿಗಳಾಗಿದ್ದರೂ ಅಂಗಡಿಗಳನ್ನು ತೆರೆಯಲು ಅಧಿಕಾರಿಗಳು ಬಿಡುತ್ತಿಲ್ಲ. ಹಲವು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ತಿಳಿಸಿದರು.