ವಾಯುವಿಹಾರಕ್ಕಾಗಿ ಆಗಮಿಸಿದ್ದ ಜನರು ಚಳಿಯಿಂದ ನಡುಗಿದರು. ದೈಹಿಕ ಕಸರತ್ತಿಗೆ ವಿರಾಮ ನೀಡಿ, ಲಗುಬಗೆಯಿಂದ ಮನೆಯತ್ತ ಮರಳಿ ಹೆಜ್ಜೆ ಹಾಕಿದರು. ಕೆಲವರು, ಅಲ್ಲಲ್ಲಿ ಒಣಗಿಹೋಗಿದ್ದ ಎಲೆಗಳು ಹಾಗೂ ಕಟ್ಟಿಗೆ ತುಂಡುಗಳನ್ನು ಸೇರಿಸಿಕೊಂಡು ಬೆಂಕಿ ಹಾಕಿ, ಮೈ ಕಾಯಿಸಿಕೊಂಡರು. ಸ್ವೇಟರ್, ಕ್ಯಾಪ್ ಹಾಕಿಕೊಂಡು ವಿದ್ಯಾರ್ಥಿಗಳು ಶಾಲೆಗೆ ತೆರಳಿದರು. 9ಗಂಟೆಯ ನಂತರ ಸೂರ್ಯನ ಕಿರಣಗಳು ಭೂಮಿ ತಲುಪಿದವು. ಸೂರ್ಯನ ಕಿರಣಗಳ ಶಾಖಕ್ಕೆ ಮಂಜು ಕರಗಿ, ವಾತಾವರಣ ತಿಳಿಯಾಯಿತು.