<p><strong>ಬೆಳಗಾವಿ</strong>: ಇಲ್ಲಿನ ರಕ್ಕಸಕೊಪ್ಪ ಜಲಾಶಯದ ಬಳಿ ಶನಿವಾರ, ಕಾರಿನಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹5.63 ಲಕ್ಷ ಬೆಲೆಬಾಳುವ ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.</p><p>ಗಣೇಶೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಹೀಗಾಗಿ, ಗೋವಾದಿಂದ ಅಕ್ರಮವಾಗಿ ಮದ್ಯದ ಸಾಗಣೆ ನಿರಂತರ ನಡೆದಿದೆ. ಇದರ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ರಕ್ಕಸಕೊಪ್ಪ ಜಲಾಶಯದ ಬಳಿ ಕಾವಲು ನಿಂತಿದ್ದರು.</p><p>ಇದೇ ಮಾರ್ಗದಲ್ಲಿ ದಾಟುತ್ತಿದ್ದ ದುಬಾರಿ ಕಾರನ್ನು ಅನುಮಾನದಿಂದ ತಪಾಸಣೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ. ಕಾರ್ ಓಡಿಸುತ್ತಿದ್ದ ಬಾದರವಾಡಿ ಗ್ರಾಮದ ಬಾಳು ಸಾತೇರಿ ಎಂಬಾತ ಪರಾರಿಯಾದ. ವಿವಿಧ 10 ಬ್ಯಾಂಡುಗಳ 50 ಮದ್ಯದ ಬಾಕ್ಸುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p><strong>ವರದಿ ಬಳಿಕ ಕಟ್ಟೆಚ್ಚರ:</strong> ಗೋವಾದಿಂದ ಅಕ್ರಮವಾಗಿ ಮದ್ಯ ಸರಬರಾಜು ಆಗುತ್ತಿರುವ ಬಗ್ಗೆ ಆಗಸ್ಟ್ 24ರಂದು ‘ಪ್ರಜಾವಾಣಿ’ಯ ಒಳನೋಟ ಅಂಕಣದಲ್ಲಿ ತನಿಖಾ ವರದಿ ಪ್ರಕಟವಾಗಿತ್ತು. ಬಳಿಕ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ತಂಡ ಕಟ್ಟಿಕೊಂಡು ಗಡಿಯಲ್ಲಿ ತಪಾಸಣೆ ಚುರುಕುಗೊಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಇಲ್ಲಿನ ರಕ್ಕಸಕೊಪ್ಪ ಜಲಾಶಯದ ಬಳಿ ಶನಿವಾರ, ಕಾರಿನಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹5.63 ಲಕ್ಷ ಬೆಲೆಬಾಳುವ ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.</p><p>ಗಣೇಶೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಹೀಗಾಗಿ, ಗೋವಾದಿಂದ ಅಕ್ರಮವಾಗಿ ಮದ್ಯದ ಸಾಗಣೆ ನಿರಂತರ ನಡೆದಿದೆ. ಇದರ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ರಕ್ಕಸಕೊಪ್ಪ ಜಲಾಶಯದ ಬಳಿ ಕಾವಲು ನಿಂತಿದ್ದರು.</p><p>ಇದೇ ಮಾರ್ಗದಲ್ಲಿ ದಾಟುತ್ತಿದ್ದ ದುಬಾರಿ ಕಾರನ್ನು ಅನುಮಾನದಿಂದ ತಪಾಸಣೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ. ಕಾರ್ ಓಡಿಸುತ್ತಿದ್ದ ಬಾದರವಾಡಿ ಗ್ರಾಮದ ಬಾಳು ಸಾತೇರಿ ಎಂಬಾತ ಪರಾರಿಯಾದ. ವಿವಿಧ 10 ಬ್ಯಾಂಡುಗಳ 50 ಮದ್ಯದ ಬಾಕ್ಸುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p><strong>ವರದಿ ಬಳಿಕ ಕಟ್ಟೆಚ್ಚರ:</strong> ಗೋವಾದಿಂದ ಅಕ್ರಮವಾಗಿ ಮದ್ಯ ಸರಬರಾಜು ಆಗುತ್ತಿರುವ ಬಗ್ಗೆ ಆಗಸ್ಟ್ 24ರಂದು ‘ಪ್ರಜಾವಾಣಿ’ಯ ಒಳನೋಟ ಅಂಕಣದಲ್ಲಿ ತನಿಖಾ ವರದಿ ಪ್ರಕಟವಾಗಿತ್ತು. ಬಳಿಕ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ತಂಡ ಕಟ್ಟಿಕೊಂಡು ಗಡಿಯಲ್ಲಿ ತಪಾಸಣೆ ಚುರುಕುಗೊಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>