<p><strong>ಘಟಪ್ರಭಾ (ಗೋಕಾಕ): </strong>ಮೂವರು ಸವಾರಿ ಮಾಡುತ್ತಿದ್ದರು ಎನ್ನಲಾದ ದ್ವಿಚಕ್ರ ವಾಹನವೊಂದು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಒಬ್ಬ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾಗಿ ಇನ್ನೊಬ್ಬ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮತ್ತೋರ್ವ ಸವಾರನ ಕೈ ಮತ್ತು ಕಾಲು ತುಂಡರಿಸಿದೆ. ಘಟಪ್ರಭಾ-ಗೋಕಾಕ ರಸ್ತೆಯ ಪರಮೇಶ್ವರವಾಡಿ ಬಳಿ ಸೋಮವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ.</p>.<p>ಮೃತರನ್ನು ತಾಲ್ಲೂಕಿನ ಮಲ್ಲಾಪೂರ ಪಿಜಿ ಗ್ರಾಮದ ಶ್ರೇಯಸ್ ಉದಯ ಪತ್ತಾರ (19), ಘಟಪ್ರಭಾದ ಯಲ್ಲಪ್ಪ ಆನಂದ ಕೋಳಿ (20) ಎಂದು ಮತ್ತು ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳವನ್ನು ಘಟಪ್ರಭಾ ನಿವಾಸಿ ವಿನಾಯಕ ಕೆಂಪಣ್ಣ ಹಾದಿಮನಿ ಎಂದು ಗುರುತಿಸಲಾಗಿದೆ.</p>.<p>ಮೂವರು ಯುವಕರು ಮಿತ್ರನೋರ್ವನ ಜನ್ಮದಿನ ಆಚರಣೆಯಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರು ಘಟಪ್ರಭಾದಿಂದ ಮೂಡಲಗಿ ತಾಲ್ಲೂಕಿನ ಶಿವಾಪೂರ ಗ್ರಾಮಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.</p>.<p>ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಘಟಪ್ರಭಾ (ಗೋಕಾಕ): </strong>ಮೂವರು ಸವಾರಿ ಮಾಡುತ್ತಿದ್ದರು ಎನ್ನಲಾದ ದ್ವಿಚಕ್ರ ವಾಹನವೊಂದು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಒಬ್ಬ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾಗಿ ಇನ್ನೊಬ್ಬ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮತ್ತೋರ್ವ ಸವಾರನ ಕೈ ಮತ್ತು ಕಾಲು ತುಂಡರಿಸಿದೆ. ಘಟಪ್ರಭಾ-ಗೋಕಾಕ ರಸ್ತೆಯ ಪರಮೇಶ್ವರವಾಡಿ ಬಳಿ ಸೋಮವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ.</p>.<p>ಮೃತರನ್ನು ತಾಲ್ಲೂಕಿನ ಮಲ್ಲಾಪೂರ ಪಿಜಿ ಗ್ರಾಮದ ಶ್ರೇಯಸ್ ಉದಯ ಪತ್ತಾರ (19), ಘಟಪ್ರಭಾದ ಯಲ್ಲಪ್ಪ ಆನಂದ ಕೋಳಿ (20) ಎಂದು ಮತ್ತು ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳವನ್ನು ಘಟಪ್ರಭಾ ನಿವಾಸಿ ವಿನಾಯಕ ಕೆಂಪಣ್ಣ ಹಾದಿಮನಿ ಎಂದು ಗುರುತಿಸಲಾಗಿದೆ.</p>.<p>ಮೂವರು ಯುವಕರು ಮಿತ್ರನೋರ್ವನ ಜನ್ಮದಿನ ಆಚರಣೆಯಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರು ಘಟಪ್ರಭಾದಿಂದ ಮೂಡಲಗಿ ತಾಲ್ಲೂಕಿನ ಶಿವಾಪೂರ ಗ್ರಾಮಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.</p>.<p>ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>