ಬೈಲಹೊಂಗಲ ದೊಡ್ಡ ಕೆರೆಯಲ್ಲಿ ಬಿಟ್ಟಿರುವ ಬಾತುಕೋಳಿ ಮರಿಗಳು ನೋಡುಗರನ್ನು ಆಕರ್ಷಿಸುತ್ತಿವೆ
ಉದ್ಯಾನವನದ ಆಕರ್ಷಣೆ ಬಾತುಕೋಳಿ ಮರಿಗಳು ವಾಯುವಿಹಾರಿ, ಪ್ರವಾಸಿಗರಿಂದ ಬಾತುಕೋಳಿ ವೀಕ್ಷಣೆ ಪುರಸಭೆಯ ನೂತನ ಪ್ರಯೋಗಕ್ಕೆ ಮೆಚ್ಚುಗೆ
ಕೆರೆಯ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಒದಗಿಸಲಾಗಿದೆ. ಬರುವ ದಿನಮಾನಗಳಲ್ಲಿ ಇನ್ನಷ್ಟು ಅನುದಾನ ನೀಡಿ ಕೆರೆಯನ್ನು ಮಾದರಿ ಕೆರೆಯನ್ನಾಗಿಸಲಾಗುವುದು.
ಮಹಾಂತೇಶ ಕೌಜಲಗಿ ಶಾಸಕ
ಕೆರೆ ಒತ್ತುವರಿ ತೆರುವುಗೊಳಿಸಬೇಕು. ಇನ್ನೂ ಹೆಚ್ಚಿನ ರೀತಿಯಲ್ಲಿ ಕೆರೆಯನ್ನು ಸಮಗ್ರ ಅಭಿವೃದ್ಧಿಗೊಳಿಸಿ ಮಾದರಿಯಾಗಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ದಿಟ್ಟ ಕ್ರಮ ಜರುಗಿಸಬೇಕು.
ಮೋಹನ ಚವ್ಹಾನ ನಿವಾಸಿ
ಪ್ರವಾಸಿಗರ ಸ್ಥಳೀಯ ನಾಗರಿಕರ ಆಕರ್ಷಣೆಗೆ ಒಳಗಾಗಿರುವ ದೊಡ್ಡ ಕೆರೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕೆರೆಯ ನೀರು ಯಾವುದೇ ಕಾರಣಕ್ಕೂ ಕಲುಷಿತ ಆಗದಂತೆ ಪುರಸಭೆಯಿಂದ ಮುಂಜಾಗೃತಿವಹಿಸಲಾಗುತ್ತಿದೆ. ಸಾರ್ವಜನಿಕರು ಕೆರೆ ಸುತ್ತಮುತ್ತಲಿನ ನಿವಾಸಿಗಳು ಸಹಕಾರ ನೀಡಬೇಕು. ಕೆರೆ ಸುತ್ತಮುತ್ತ ಪುರಸಭೆ ಸಿಬ್ಬಂದಿಯಿಂದ ಕಾವಲುವಹಿಸಲಾಗಿದೆ. ಬರುವ ದಿನಮಾನಗಳಲ್ಲಿ ಕೆರೆಗೆ ಹೊಸ ಚೈತನ್ಯ ತುಂಬಲಾಗುವುದು.
ವಿಜಯ ಬೋಳನ್ನವರ ಅಧ್ಯಕ್ಷ
ಕೆಲ ದಾನಿಗಳು ಪುರಸಭೆಯಿಂದ ಕೆರೆಯಲ್ಲಿ 300ಕ್ಕೂ ಅಧಿಕ ಸಂಖ್ಯೆಯಲ್ಲಿ ಬಾತುಕೋಳಿ ಮರಿಗಳನ್ನು ಬಿಡಲಾಗಿದೆ. ಇದರಿಂದ ಕೆರೆಯ ಆಕರ್ಷಣೆ ಹೆಚ್ಚಿದೆ. ಪಾದಚಾರಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಶಾಸಕರ ಮಾರ್ಗದರ್ಶನದಲ್ಲಿ ದೊಡ್ಡ ಕೆರೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬರುವ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆರೆ ಆಕರ್ಷಣೆಗೊಳಿಸಿ ಮಾದರಿ ಉದ್ಯಾನವಾಗಿಸಲಾಗುವುದು.