ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ಇದೇ 17ರಂದು ಬೆಳಗಾವಿಯಲ್ಲಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಭೈರಪ್ಪ ಅವರು, ‘ಮುಂದಿನ ಸೋಮವಾರ ಬೆಳಗಾವಿಗೆ ಹೋಗಲು ತಯಾರಾಗಿ ಮರಾಠಿ ಪುಂಡರ ಸೊಕ್ಕು ಮುರಿದು ರಾಯಣ್ಣ ಪ್ರತಿಮೆ ಪ್ರತಿಷ್ಠಾಪಣೆ ಮಾಡಿ ಬರೋಣ’ ಎಂದು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದಿದ್ದರು.