ಬೆಳಗಾವಿ: ಇಲ್ಲಿನ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದೆ ತಾಯಿ ಸೋಮವ್ವ ಅಂಗಡಿ ನೋವಿನ ಕಡಲಲ್ಲಿ ಮುಳುಗಿದ್ದಾರೆ. ಅವರಿಗೆ ಸಾಂತ್ವನ ಹೇಳುವ ಕೆಲಸವನ್ನು ಬಂಧುಗಳು ಮಾಡುತ್ತಿದ್ದಾರಾದರೂ ಸಮಾಧಾನಪಡಿಸಲು ಸಾಧ್ಯವಾಗುತ್ತಿಲ್ಲ. ಅವರೊಂದಿಗೆ ತಾವೂ ಕಣ್ಣೀರಾಗುತ್ತಿದ್ದಾರೆ.