ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನರ್ಸಿಂಗ್ ಕೆಲಸ ಮಾಡುತ್ತಿರುವ ಮಹಾದೇವಿ ಜೈನರ ಅವರು, 30 ದಿನಗಳ ಶಿಶುವನ್ನು ಬೆಳಗಾವಿಗೆ ಕರೆತರುವಾಗ ರಕ್ಷಿಸಲಾಗಿದೆ. ವೈದ್ಯ ಎಂದು ಹೇಳಿಕೊಂಡ ಅಬ್ದುಲ್ಗಫಾರ್ ಲಾಡಖಾನ್ ತಮ್ಮ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದಾರೆ. ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದು, ಅವರ ಸಮಗ್ರ ಮಾಹಿತಿ ಕಲೆಹಾಕುತ್ತಿದ್ದೇವೆ. ಈ ಹಿಂದೆಯೂ ಇಂಥ ಪ್ರಕರಣ ನಡೆದಿವೆಯೇ ಎಂದೂ ತನಿಖೆ ಮಾಡುತ್ತಿದ್ದೇವೆ’ ಎಂದರು.