ಬಸವರಾಜ ಅವರ ತಾಯಿ ಕೆಲಸಕ್ಕೆ ಹೋಗುವುದು ಬೇಡ ಎಂದು ಮಗನನ್ನು ತಡೆದರೂ ಗೆಳೆಯರ ಒತ್ತಾಯಕ್ಕೆ ಮಣಿದು ದುಡಿಮೆಗೆ ಹೊರಟಿದ್ದರು.
ಅಪಘಾತದಿಂದ ತೀವ್ರ ಗಾಯಗೊಂಡ ಬಸವರಾಜ ಅವರ ನರಳಾಟ ಕಂಡವರಿಗೆ ಕರುಳು ಕಿತ್ತುಬಂದಂತಾಯಿತು. ಕೆಲವೇ ಕ್ಷಣಗಳಲ್ಲಿ ಕೂಗಾಟ ನಿಲ್ಲಿಸಿದ ಬಸವರಾಜ ಪ್ರಾಣಪಕ್ಷಿ ಹಾರಿತು. ಅವರನ್ನು ಕಂಡು ಗ್ರಾಮದವರ ದುಃಖ ಮಡುಗಟ್ಟಿತು.