ಇಲ್ಲಿನ ಆದಿಜಾಂಬವ ನಗರದ ತಮ್ಮ ಮನೆಯಲ್ಲಿದ್ದ ಸಿದ್ದಪ್ಪ ಅವರನ್ನು ಬುಧವಾರ ರಾತ್ರಿ ಹೊರಗೆಳೆದುಕೊಂಡು ಬಂದ ಆರೋಪಿಗಳು, ಮನಸೋಇಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಚಾಕುವಿನಿಂದ ಇರಿದು ಪರಾರಿಯಾದರು. ತೀವ್ರವಾಗಿ ಗಾಯಗೊಂಡಿದ್ದ ಸಿದ್ದಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ, ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದರು.