ಏನಿದರ ವಿಶೇಷ?: ‘ಚವಾಟ್ ಗಲ್ಲಿಯ ಜ್ಯೋತಿಬಾ ಮಂದಿರದಲ್ಲಿ ವಿಜಯದಶಮಿ ಮುನ್ನಾ ದಿನದಂದು ಅಭಿಷೇಕ, ವಿಶೇಷ ಪೂಜೆ ನೆರವೇರುತ್ತದೆ. ಈ ದೇವಾಲಯದ ಪಲ್ಲಕ್ಕಿ ಹಾಗೂ ಇದೇ ಪ್ರದೇಶದ ಅಲಂಕೃತ ಎತ್ತು ಗಣಪತ ಗಲ್ಲಿ, ಮಾರುತಿ ಗಲ್ಲಿ ಮಾರ್ಗವಾಗಿ ಮೆರವಣಿಗೆ ಮೂಲಕ ಸಂಚರಿಸಿ ಹುತಾತ್ಮ ಚೌಕ್ ತಲುಪುತ್ತವೆ. ಅಲ್ಲಿ ಭಡಕಲ್ ಗಲ್ಲಿಯ ಬನಶಂಕರಿ ದೇವಸ್ಥಾನದ ಪಲ್ಲಕ್ಕಿ, ಮಾರುತಿ ಗಲ್ಲಿಯ ಮಾರುತಿ ಮಂದಿರದ ರೂಪಕ ಸೇರಿ ವಿವಿಧ ದೇವಾಲಯಗಳ 11 ಪಲ್ಲಕ್ಕಿಗಳು ಸಮಾವೇಶಗೊಳ್ಳುತ್ತವೆ. ಬಳಿಕ, ಈ ಮೆರವಣಿಗೆ ನಗರದ ವಿವಿಧ ಮಾರ್ಗಗಳಲ್ಲಿ ಸಾಗಿ ವಿದ್ಯಾನಿಕೇತನ ಶಾಲೆ ಮೈದಾನ ತಲುಪಿದ ನಂತರ, ಧಾರ್ಮಿಕ ವಿಧಾನ ನೆರವೇರಿಸಲಾಗುತ್ತದೆ’ ಎಂದು ವತನದಾರ್ ಪಾಟೀಲ ಮನೆತನದ ರಂಜೀತ್ ಚವ್ಹಾಣ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.