<p><strong>ಚನ್ನಮ್ಮನ ಕಿತ್ತೂರು:</strong> ಸೋಮವಾರ ಪೇಟೆಯ ಬೆಲ್ಲದ ಓಣಿಯಲ್ಲಿರುವ ಎಂಎಸ್ಐಎಲ್ ಮದ್ಯದ ಮಳಿಗೆ ಸ್ಥಳಾಂತರಕ್ಕೆ ಆಗ್ರಹಿಸಿ ಚನ್ನಮ್ಮನ ಕಿತ್ತೂರು ಮಹಿಳೆಯರು ಸೇರಿ ಸಾರ್ವಜನಿಕರು ಶುಕ್ರವಾರದಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.</p><p>ಮದ್ಯ ಮಳಿಗೆ ಅಂಗಡಿ ಮುಂದೆ ಶಾಮಿಯಾನ ಹಾಕಿ ಕುಳಿತು ಪ್ರತಿಭಟನೆ ನಡೆಸಿದ ಮಹಿಳೆಯರು, ಪ್ರಕರಣ ಇತ್ಯರ್ಥ ಆಗುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಘೋಷಿಸಿದರು.</p><p>ನಮಗೆ ನ್ಯಾಯ ಸಿಗದಿದ್ದರೆ, ರಾಣಿ ಚನ್ನಮ್ಮ ವರ್ತುಲ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ಕೊಟ್ಟರು.</p><p>ಮಳಿಗೆ ಸ್ಥಳಾಂತರಕ್ಕೆ ಆಗ್ರಹಿಸಿ ದಶಕದಿಂದ ಹೋರಾಟ ಮಾಡುತ್ತ ಬರಲಾಗಿದೆ. ಆರಂಭದಲ್ಲಿ ಅಧಿಕಾರಿಗಳು ಸ್ಪಂದಿಸಿದಂತೆ ಮಾಡುತ್ತಾರೆ. ಆಗ ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸುತ್ತೇವೆ. ನಂತರ ಸ್ಥಳಾಂತರಕ್ಕೆ ಗಮನ ಹರಿಸುವುದಿಲ್ಲ. ದಶಕದಿಂದ ಅಧಿಕಾರಿಗಳು ಇಲ್ಲಿನ ಸಾರ್ವಜನಿಕರೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಲೇ ಬಂದಿದ್ದಾರೆ ಎಂದು ಮಹಿಳೆಯರು ಆರೋಪಿಸಿದರು.</p><p><strong>ಅಧಿಕಾರಿ ಎದುರು ಪಟ್ಟು</strong></p><p>ನಮಗೆ ರಾಜಕೀಯ ಬೇಡ. ಅಂಗಡಿ ತೆರೆಯಲು ಬಿಡುವುದಿಲ್ಲ ಎಂದು ಅಬಕಾರಿ ಅಧಿಕಾರಿ ಎದುರು ಪಟ್ಟು ಹಿಡಿದರು.</p><p>ಚನ್ನಮ್ಮ ಹಿರೇಮಠ, ನೀಲವ್ವ ತಿಮ್ಮಾಪುರ, ಮಹಾದೇವಿ ಹಾಲ್ಮಠ, ಅನ್ನಪೂರ್ಣ ಪಾಟೀಲ, ರೇಖಾ ಕಾಜಗಾರ, ಕಸ್ತೂರಿ ತಿಮ್ಮಾಪುರ, ಗೌರವ್ವ ಅಂಗಡಿ, ನಿರ್ಮಲಾ ಪಾಟೀಲ, ಕಾವ್ಯಾ ಹಿರೇಮಠ, ಮಹಾದೇವಿ ಪಾಟೀಲ, ಸುಮಂಗಲಾ ಹೊಸೂರ, ಗೌರವ್ವ ಹಾಲ್ಮಠ, ಪ್ರವೀಣ ಸರದಾರ ಪಾಲ್ಗೊಂಡಿದ್ದಾರೆ.</p><p>ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು:</strong> ಸೋಮವಾರ ಪೇಟೆಯ ಬೆಲ್ಲದ ಓಣಿಯಲ್ಲಿರುವ ಎಂಎಸ್ಐಎಲ್ ಮದ್ಯದ ಮಳಿಗೆ ಸ್ಥಳಾಂತರಕ್ಕೆ ಆಗ್ರಹಿಸಿ ಚನ್ನಮ್ಮನ ಕಿತ್ತೂರು ಮಹಿಳೆಯರು ಸೇರಿ ಸಾರ್ವಜನಿಕರು ಶುಕ್ರವಾರದಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.</p><p>ಮದ್ಯ ಮಳಿಗೆ ಅಂಗಡಿ ಮುಂದೆ ಶಾಮಿಯಾನ ಹಾಕಿ ಕುಳಿತು ಪ್ರತಿಭಟನೆ ನಡೆಸಿದ ಮಹಿಳೆಯರು, ಪ್ರಕರಣ ಇತ್ಯರ್ಥ ಆಗುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಘೋಷಿಸಿದರು.</p><p>ನಮಗೆ ನ್ಯಾಯ ಸಿಗದಿದ್ದರೆ, ರಾಣಿ ಚನ್ನಮ್ಮ ವರ್ತುಲ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ಕೊಟ್ಟರು.</p><p>ಮಳಿಗೆ ಸ್ಥಳಾಂತರಕ್ಕೆ ಆಗ್ರಹಿಸಿ ದಶಕದಿಂದ ಹೋರಾಟ ಮಾಡುತ್ತ ಬರಲಾಗಿದೆ. ಆರಂಭದಲ್ಲಿ ಅಧಿಕಾರಿಗಳು ಸ್ಪಂದಿಸಿದಂತೆ ಮಾಡುತ್ತಾರೆ. ಆಗ ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸುತ್ತೇವೆ. ನಂತರ ಸ್ಥಳಾಂತರಕ್ಕೆ ಗಮನ ಹರಿಸುವುದಿಲ್ಲ. ದಶಕದಿಂದ ಅಧಿಕಾರಿಗಳು ಇಲ್ಲಿನ ಸಾರ್ವಜನಿಕರೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಲೇ ಬಂದಿದ್ದಾರೆ ಎಂದು ಮಹಿಳೆಯರು ಆರೋಪಿಸಿದರು.</p><p><strong>ಅಧಿಕಾರಿ ಎದುರು ಪಟ್ಟು</strong></p><p>ನಮಗೆ ರಾಜಕೀಯ ಬೇಡ. ಅಂಗಡಿ ತೆರೆಯಲು ಬಿಡುವುದಿಲ್ಲ ಎಂದು ಅಬಕಾರಿ ಅಧಿಕಾರಿ ಎದುರು ಪಟ್ಟು ಹಿಡಿದರು.</p><p>ಚನ್ನಮ್ಮ ಹಿರೇಮಠ, ನೀಲವ್ವ ತಿಮ್ಮಾಪುರ, ಮಹಾದೇವಿ ಹಾಲ್ಮಠ, ಅನ್ನಪೂರ್ಣ ಪಾಟೀಲ, ರೇಖಾ ಕಾಜಗಾರ, ಕಸ್ತೂರಿ ತಿಮ್ಮಾಪುರ, ಗೌರವ್ವ ಅಂಗಡಿ, ನಿರ್ಮಲಾ ಪಾಟೀಲ, ಕಾವ್ಯಾ ಹಿರೇಮಠ, ಮಹಾದೇವಿ ಪಾಟೀಲ, ಸುಮಂಗಲಾ ಹೊಸೂರ, ಗೌರವ್ವ ಹಾಲ್ಮಠ, ಪ್ರವೀಣ ಸರದಾರ ಪಾಲ್ಗೊಂಡಿದ್ದಾರೆ.</p><p>ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>