ಬೆಳಗಾವಿ ಜಿಲ್ಲೆ ರಾಮದುರ್ಗದಿಂದ 13 ಕಿ.ಮೀ. ದೂರದಲ್ಲಿ ಸುರೇಬಾನ ಗ್ರಾಮ ಬರುತ್ತದೆ. ಅಲ್ಲಿಂದ 3 ಕಿಲೋಮೀಟರ್ ಅಂತರದಲ್ಲಿ ಶಬರಿಕೊಳ್ಳವಿದೆ. ಶಬರಿಕೊಳ್ಳ ಪ್ರವೇಶಿಸುತ್ತಿದ್ದಂತೆಯೇ ಪ್ರಶಾಂತ ವಾತಾವರಣ ಕಾಣಸಿಗುತ್ತದೆ. ಶ್ರೀರಾಮಚಂದ್ರ ಬರುತ್ತಾನೆ, ತನ್ನನ್ನು ಪಾಪಮುಕ್ತ ಮಾಡುತ್ತಾನೆ ಎಂದು ಶಬರಿ ಕಾದುಕುಳಿತ ಜಾಗ ಇದೇ ಎಂಬುದು ಐತಿಹ್ಯ.