2017ರಿಂದ ಈವರೆಗೂ ಈ ಕೇಂದ್ರಕ್ಕೆ ಕಾಯಂ ವೈದ್ಯಾಧಿಕಾರಿ ನೇಮಕವಾಗಿಲ್ಲ. ಕೋವಿಡ್ ಪರೀಕ್ಷೆಯ ಜೊತೆ ಇತರಚಟುವಟಿಕೆಗಳನ್ನು ಸಿಬ್ಬಂದಿಯೇ ನಡೆಸಿದ್ದಾರೆ. ಗುತ್ತಿಗೆ ಆಧಾರದ ಮೇಲಿದ್ದ ವೈದ್ಯರು ಸೇರಿದಂತೆ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಾರಣ ಚಿಕಿತ್ಸೆ ನೀಡುವವರಿಲ್ಲ. ಪರಿಣಾಮ ಹಿರೇಕುಂಬಿ, ಹಂಚಿನಾಳ, ಧಡೇರಕೊಪ್ಪ, ಚಿಕ್ಕುಂಬಿ, ಆಚಮಟ್ಟಿ, ಚುಳಕಿ ಗ್ರಾಮ ಪಂಚಾಯಿತಿಗಳ ಜನರು ಆತಂಕಗೊಂಡಿದ್ದಾರೆ.