<p><strong>ಮೂಡಲಗಿ:</strong> ತನ್ನ ಯಜಮಾನನ ಸಾವಿನ ನೋವಿನಲ್ಲಿ ಅನ್ನ–ನೀರು ಬಿಟ್ಟಿದ್ದ ಶ್ವಾನ ಸೋಮವಾರ ಕೊನೆಯುಸಿರೆಳೆದ ಮನಕಲಕುವ ಘಟನೆ ತಾಲ್ಲೂಕಿನ ಅವರಾದಿಯಲ್ಲಿ ನಡೆದಿದೆ.</p>.<p>ಹಾಲು ಮಾರುವ ಶಂಕರೆಪ್ಪ ಮಡಿವಾಳರ (47) ಸೆ. 6ರಂದು (ಸೋಮವಾರ) ಹೃದಯಘಾತದಿಂದ ನಿಧನರಾದರು. ಮನೆಯವರೊಂದಿಗೆ, ಅವರು ಪ್ರೀತಿಯಿಂದ ಸಾಕಿದ್ದ ನಾಯಿಯೂ ದುಃಖಿಸುತ್ತಿತ್ತು. ಸಮಾಧಿ ಬಳಿಗೆ ಹೋಗಿ ಕಣ್ಣೀರಿಡುತ್ತಿತ್ತು. ಶ್ವಾನದ ಪ್ರೀತಿ ಕಂಡು ಜನರೂ ಮರುಗಿದರು.</p>.<p>ಶಂಕರೆಪ್ಪನ ಮನೆಯವರು ಮತ್ತು ಗ್ರಾಮದ ಜನರು ನಾಯಿಗೆ ಆಹಾರ ತಿನ್ನಿಸಲು ನಡೆಸಿದ ಪ್ರಯತ್ನ ವಿಫಲವಾಗಿತ್ತು. ತನ್ನ ಯಜಮಾನ ಗ್ರಾಮದಿಂದ 6 ಕಿ.ಮೀ. ದೂರದಲ್ಲಿರುವ ಮಹಾಲಿಂಗಪೂರದ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಶ್ವಾನವೂ ಮಹಾಲಿಂಗಪೂರಕ್ಕೆ ಓಡಿ ಹೋಗಿ ಆಸ್ಪತ್ರೆಯ ರಸ್ತೆಯಲ್ಲಿ ಪ್ರಾಣ ಬಿಟ್ಟಿದೆ. ಗ್ರಾಮದ ವ್ಯಕ್ತಿಯೊಬ್ಬರು ಅದನ್ನು ಗುರುತಿಸಿ ಗ್ರಾಮಕ್ಕೆ ತಂದಿದ್ದರು.</p>.<p>ಹೂಮಾಲೆ ಹಾಕಿ ಸಿಂಗರಿಸಿದ ಬಂಡಿಯಲ್ಲಿ ಊರೆಲ್ಲ ಮೆರವಣಿಗೆ ಮಾಡಿ, ಶಂಕರೆಪ್ಪನ ಸಮಾಧಿಯ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಲಗಿ:</strong> ತನ್ನ ಯಜಮಾನನ ಸಾವಿನ ನೋವಿನಲ್ಲಿ ಅನ್ನ–ನೀರು ಬಿಟ್ಟಿದ್ದ ಶ್ವಾನ ಸೋಮವಾರ ಕೊನೆಯುಸಿರೆಳೆದ ಮನಕಲಕುವ ಘಟನೆ ತಾಲ್ಲೂಕಿನ ಅವರಾದಿಯಲ್ಲಿ ನಡೆದಿದೆ.</p>.<p>ಹಾಲು ಮಾರುವ ಶಂಕರೆಪ್ಪ ಮಡಿವಾಳರ (47) ಸೆ. 6ರಂದು (ಸೋಮವಾರ) ಹೃದಯಘಾತದಿಂದ ನಿಧನರಾದರು. ಮನೆಯವರೊಂದಿಗೆ, ಅವರು ಪ್ರೀತಿಯಿಂದ ಸಾಕಿದ್ದ ನಾಯಿಯೂ ದುಃಖಿಸುತ್ತಿತ್ತು. ಸಮಾಧಿ ಬಳಿಗೆ ಹೋಗಿ ಕಣ್ಣೀರಿಡುತ್ತಿತ್ತು. ಶ್ವಾನದ ಪ್ರೀತಿ ಕಂಡು ಜನರೂ ಮರುಗಿದರು.</p>.<p>ಶಂಕರೆಪ್ಪನ ಮನೆಯವರು ಮತ್ತು ಗ್ರಾಮದ ಜನರು ನಾಯಿಗೆ ಆಹಾರ ತಿನ್ನಿಸಲು ನಡೆಸಿದ ಪ್ರಯತ್ನ ವಿಫಲವಾಗಿತ್ತು. ತನ್ನ ಯಜಮಾನ ಗ್ರಾಮದಿಂದ 6 ಕಿ.ಮೀ. ದೂರದಲ್ಲಿರುವ ಮಹಾಲಿಂಗಪೂರದ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಶ್ವಾನವೂ ಮಹಾಲಿಂಗಪೂರಕ್ಕೆ ಓಡಿ ಹೋಗಿ ಆಸ್ಪತ್ರೆಯ ರಸ್ತೆಯಲ್ಲಿ ಪ್ರಾಣ ಬಿಟ್ಟಿದೆ. ಗ್ರಾಮದ ವ್ಯಕ್ತಿಯೊಬ್ಬರು ಅದನ್ನು ಗುರುತಿಸಿ ಗ್ರಾಮಕ್ಕೆ ತಂದಿದ್ದರು.</p>.<p>ಹೂಮಾಲೆ ಹಾಕಿ ಸಿಂಗರಿಸಿದ ಬಂಡಿಯಲ್ಲಿ ಊರೆಲ್ಲ ಮೆರವಣಿಗೆ ಮಾಡಿ, ಶಂಕರೆಪ್ಪನ ಸಮಾಧಿಯ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>