‘ತುರ್ತು ಸಂದರ್ಭದಲ್ಲಿ ಅಗತ್ಯ ಸೇವೆಗಳನ್ನು ಒದಗಿಸಲು ಸಾರ್ವಜನಿಕ ಕಚೇರಿಗಳ ಕಾರ್ಯನಿರ್ವಹಣೆಗೆ ನಿರ್ಬಂಧ ವಿಧಿಸಿಲ್ಲ. ತುರ್ತಿಲ್ಲದ ಕೆಲಸಗಳಿಗೂ ಜನರು ಕಚೇರಿಗೆ ಬರುವುದು ಮತ್ತು ಗುಂಪಿನಲ್ಲಿ ಬಂದು ಮನವಿಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿಯ ಬೆಳವಣಿಗೆಗಳು ಸೋಂಕು ತಡೆಗಟ್ಟಲು ಮಾರಕವಾಗಿದೆ. ಹೀಗಾಗಿ, ಭೇಟಿ ಕೊಡುವುದನ್ನು ತಾತ್ಕಾಲಿಕವಾಗಿ ಕೈಬಿಟ್ಟು ದೂರವಾಣಿ ಸಂಪರ್ಕಿಸಿ ಅಹವಾಲುಗಳನ್ನು ಸಲ್ಲಿಸಬೇಕು’ ಎಂದು ಕೋರಿದ್ದಾರೆ.