ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ಕೌಶಲ ವೃದ್ಧಿಸಿಕೊಳ್ಳಲು ಸಲಹೆ

Last Updated 7 ಡಿಸೆಂಬರ್ 2020, 6:31 IST
ಅಕ್ಷರ ಗಾತ್ರ

ಬೆಳಗಾವಿ: ‘ಕಲೆ ಕಲಿತು ಅದರಲ್ಲಿ ಮಗ್ನರಾದರೆ ಪರಿಪೂರ್ಣ ಕಲಾವಿದರಾಗಲು ಸಾಧ್ಯವಾಗುತ್ತದೆ. ಕೌಶಲವಿದ್ದರೆ ಎಲ್ಲಿ ಬೇಕಾದರೂ ಅಭಿನಯ ಮಾಡಬಹುದಾಗಿದೆ’ ಎಂದು ಚಲನಚಿತ್ರ ನಟ ಎಂ.ಕೆ. ಮಠ ಅಭಿಪ್ರಾಯಪಟ್ಟರು.

ನಗರದಲ್ಲಿ ಯುವ ರಂಗ ಸಾಂಸ್ಕೃತಿಕ ಸಂಸ್ಥೆಯಿಂದ ಹಮ್ಮಿಕೊಂಡಿರುವ ಉಚಿತ ಅಭಿನಯ ತರಬೇತಿ ಶಿಬಿರಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ದೊಡ್ಡ ಅಥವಾ ಸಣ್ಣ ಕಲಾವಿದರು ಎಂಬುದು ಇಲ್ಲ. ನಾವೆಲ್ಲರೂ ಕಲೆಯ ಆರಾಧಾಕರು. ಆ ರೀತಿ ವ್ಯತ್ಯಾಸ ಮಾಡುವುದು ದೊಡ್ಡ ತಪ್ಪು. ರಂಗಭೂಮಿಯಿಂದ ಮನಸ್ಸು, ಭಾಷೆ ಹಾಗೂ ಆಂಗಿಕ ಶುದ್ಧಿ ಆಗುತ್ತದೆ. ಅದು ಕಲಿಸಿಕೊಡುವ ಜ್ಞಾನ ಮತ್ತೆಲ್ಲೂ ಸಿಗುವುದಿಲ್ಲ’ ಎಂದರು.

‘ಯಾವ ಕಲಾವಿದರೂ ಪರಿಪೂರ್ಣ ಆಗಿರುವುದಿಲ್ಲ. ನಾನು ಇನ್ನೂ ಕಲಿಯಬೇಕಿದೆ. ಸಿನಿಮಾ ರಂಗಕ್ಕೂ ರಂಗಭೂಮಿಗೂ ಬಹಳ ವ್ಯತ್ಯಾಸವಿದೆ. ಸಿನಿಮಾ ಲೋಕ ಭ್ರಮಾಲೋಕ. ರಂಗಭೂಮಿ ವಾಸ್ತವ. ಇಲ್ಲಿ ಅಭಿನಯ ಕಲಿತು ಸಿನಿಮಾ ನಟನಾಗುತ್ತೇನೆ ಎಂಬ ಭ್ರಮೆಯಲ್ಲಿ ಬರಬಾರದು’ ಎಂದು ಕಿವಿಮಾತು ಹೇಳಿದರು.

ಪತ್ರಕರ್ತ ಮುರುಗೇಶ ಶಿವಪೂಜಿ, ‘ಸಿನಿಮಾ ಲೋಕದಲ್ಲಿ ಬೆಳೆಯಬೇಕಾದರೆ ರಂಗಭೂಮಿ ಬುನಾದಿಯಾಗಿದೆ. ಇಲ್ಲಿ ಆಸಕ್ತಿಯಿಂದ ನಟನಾ ಕೌಶಲ ಕಲಿಯಯವುದು ಅಗತ್ಯವಿದೆ’ ಎಂದರು.

ರಂಗ ನಿರ್ದೇಶಕ ಬಾಬಾಸಾಹೇಬ ಕಾಂಬಳೆ, ‘ತಿಂಗಳವರೆಗೆ ನಡೆಯಲಿರುವ ಈ ಶಿಬಿರದಲ್ಲಿ 20 ಮಂದಿ ಭಾಗವಹಿಸಿದ್ದಾರೆ. ‘ಸಂತ ಶಿಶುನಾಳ ಷರೀಫ’ ನಾಟಕ ಪ್ರಸ್ತುತಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಪತ್ರಕರ್ತ ಭೈರೋಬಾ ಕಾಂಬಳೆ, ‘ಅಭಿನಯವನ್ನು ಆಸಕ್ತಿಯಿಂದ ಕಲಿತು ಉತ್ತಮ ಕಲಾವಿದರಾಗಲು ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇದೊಂದು ಉತ್ತಮ ವೇದಿಕೆಯಾಗಿದೆ’ ಎಂದರು.

ರಂಗ ಸಂಘಟಕ ಬಸವರಾಜ ತಳವಾರ, ಜೀವನ್ಮುಖಿ ಪ್ರತಿಷ್ಠಾನದ ಕಿರಣಕುಮಾರ ಪಾಟೀಲ, ಸಂಗಮಿತ್ರಾ ಕಾಂಬಳೆ, ವಿಷ್ಣು ಕಾಮಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT