<p>ಖಾನಾಪುರ: ತಾಲ್ಲೂಕಿನ ಕಬನಾಳಿ ಗ್ರಾಮದ ಬಳಿ ಮಂಗಳವಾರ ಹೊಲ ಉಳುಮೆ ಮಾಡುತ್ತಿದ್ದ ವೇಳೆ ಚಿಕ್ಕ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.</p>.<p>ತಿವೋಲಿವಾಡಾ ನಿವಾಸಿ, ನಿವೃತ್ತ ಶಿಕ್ಷಕರಾದ ಪಾಂಡುರಂಗ ಸದೊಬ್ಬ ಲಾಡಗಾಂವ್ಕರ್ (61) ಮೃತಪಟ್ಟವರು.</p>.<p>ಭತ್ತ ನಾಟಿ ಮಾಡುವ ಸಲುವಾಗಿ ಈ ರೈತ ಹೊಲ ಉಳುಮೆ ಮಾಡುತ್ತಿದ್ದರು. ಗದ್ದೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ತಗ್ಗಿಗೆ ಸಿಕ್ಕಿಕೊಂಡ ಚಿಕ್ಕ ಟ್ರ್ಯಾಕ್ಟರ್ (ರೂಟೋವೇಟರ್) ಹಿಂದಕ್ಕೆ ಪಲ್ಟಿಯಾಗಿ ಬಿದ್ದಿತು. ಕೆಸರಿನಡಿ ಸಿಲುಕಿದ ರೈತ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸ್ಥಳೀಯರ ನೆರವಿನಿಂದ ಮೃತರ ಕಳೇಬರವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಘಟನಾ ಸ್ಥಳಕ್ಕೆ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಡಾ.ಅಂಜಲಿ ನಿಂಬಾಳಕರ, ಅರವಿಂದ ಪಾಟೀಲ ಭೇಟಿ ನೀಡಿದರು.</p>.<p>ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಖಾನಾಪುರ: ತಾಲ್ಲೂಕಿನ ಕಬನಾಳಿ ಗ್ರಾಮದ ಬಳಿ ಮಂಗಳವಾರ ಹೊಲ ಉಳುಮೆ ಮಾಡುತ್ತಿದ್ದ ವೇಳೆ ಚಿಕ್ಕ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.</p>.<p>ತಿವೋಲಿವಾಡಾ ನಿವಾಸಿ, ನಿವೃತ್ತ ಶಿಕ್ಷಕರಾದ ಪಾಂಡುರಂಗ ಸದೊಬ್ಬ ಲಾಡಗಾಂವ್ಕರ್ (61) ಮೃತಪಟ್ಟವರು.</p>.<p>ಭತ್ತ ನಾಟಿ ಮಾಡುವ ಸಲುವಾಗಿ ಈ ರೈತ ಹೊಲ ಉಳುಮೆ ಮಾಡುತ್ತಿದ್ದರು. ಗದ್ದೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ತಗ್ಗಿಗೆ ಸಿಕ್ಕಿಕೊಂಡ ಚಿಕ್ಕ ಟ್ರ್ಯಾಕ್ಟರ್ (ರೂಟೋವೇಟರ್) ಹಿಂದಕ್ಕೆ ಪಲ್ಟಿಯಾಗಿ ಬಿದ್ದಿತು. ಕೆಸರಿನಡಿ ಸಿಲುಕಿದ ರೈತ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸ್ಥಳೀಯರ ನೆರವಿನಿಂದ ಮೃತರ ಕಳೇಬರವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಘಟನಾ ಸ್ಥಳಕ್ಕೆ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಡಾ.ಅಂಜಲಿ ನಿಂಬಾಳಕರ, ಅರವಿಂದ ಪಾಟೀಲ ಭೇಟಿ ನೀಡಿದರು.</p>.<p>ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>