ಕಾಲೇಜಿನಲ್ಲಿ ತರಗತಿಗಳು ಪುನರಾರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ, ಎಲ್ಲ ಕೊಠಡಿಗಳನ್ನೂ ಸ್ಯಾನಿಟೈಸ್ ಮಾಡಲಾಯಿತು. ಎಲ್ಲ ಸಿಬ್ಬಂದಿ ಮತ್ತು ಆಗಮಿಸಿದ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಯಿತು. ಆರೋಗ್ಯಾಧಿಕಾರಿ ಡಾ.ಉಮೇಶ ಚರಂತಿಮಠ, ಲ್ಯಾಬ್ ಟೆಕ್ನೀಷಿಯನ್ ದತ್ತ ಸಾಳುಂಕೆ, ಲಿಯಾಖತ್ ಶೇಖ್, ಶಾಂತು ಚಾಂಗಳೆ ಮತ್ತು ಸತೀಶ ಬಡೋಡಕರ ಅವರನ್ನು ಗೌರವಿಸಲಾಯಿತು.