<p><strong>ಬೆಳಗಾವಿ</strong>: ‘ಕಾರ್ಖಾನೆಗಳಲ್ಲಿ ಯಾವುದೇ ಅವಘಡ ಸಂಭವಿಸಿದಾಗ ಕಾರ್ಮಿಕರ ಪ್ರಾಣ ಹಾನಿ ಆಗದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಯ ಎಲ್ಲ ಕಾರ್ಖಾನೆಗಳ ಮಾಲೀಕರೂ ಇದನ್ನು ಚಾಚೂತಪ್ಪದೇ ಪಾಲಿಸಬೇಕು’ ಎಂದು ಸಂಸದ ಜಗದೀಶ ಶೆಟ್ಟರ್ ಸೂಚಿಸಿದರು.</p><p><strong>ಬೆಳಗಾವಿ </strong>ತಾಲ್ಲೂಕಿನ ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಸ್ನೇಹಂ ಕಾರ್ಖಾನೆಯಲ್ಲಿ ಈಚೆಗೆ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಮಂಗಳವಾರ ಕಾರ್ಖಾನೆಗೆ ಭೇಟಿ ನೀಡಿ ಮಾತನಾಡಿದರು.</p><p>‘ಕಾರ್ಖಾನೆಗಳಲ್ಲಿ ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ. ಮಾರ್ಕಂಡೇಯ ನಗರದ ನಿವಾಸಿ ಯಲಗೊಂಡ ಗುಂಡ್ಯಾಗೋಳ ಅವರು ನಾವಗೆಯ ಕಾರ್ಖಾನೆಯಲ್ಲಿ ಸಜೀವ ದಹನವಾಗದ್ದು ದುಃಖದ ಸಂಗತಿ. ಇಂಥ ಸಂದರ್ಭಗಳಲ್ಲಿ ಕಾರ್ಖಾನೆಗಳ ಮಾಲೀಕರು ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕು’ ಎಂದೂ ತಿಳಿಸಿದರು.</p><p>ಕಾರ್ಖಾನೆಯ ಸುಟ್ಟ ಪ್ರದೇಶವನ್ನು ಪರಿಶೀಲಿಸಿದ ಶೆಟ್ಟರ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾರ್ಕಂಡೇಯ ನಗರಕ್ಕೆ ತೆರಳಿ ಮೃತ ಯಲಗೊಂಡ ಅವರ ತಂದೆ ಸಣ್ಣಯಲ್ಲಪ್ಪ ಅವರಿಗೆ ಸಾಂತ್ವನ ಹೇಳಿದರು.</p><p>ಮಾಜಿ ಶಾಸಕ ಸಂಜಯ ಪಾಟೀಲ, ಮುಖಂಡರಾದ ಧನಂಜಯ ಜಾಧವ್, ಚೇತನ್ ಅಂಗಡಿ, ಹೇಮಂತ ಪಾಟೀಲ, ನಾಗೇಂದ್ರ ದೇಸಾಯಿ, ಸಂತೋಷ ದೇಸಾಯಿ, ಗ್ರಾಮ ಪಂಚಾಯಿತಿಯ ಸದಸ್ಯರು ಇದ್ದರು.</p><p><strong>ನೀವೇನು ಸಾಚಾನಾ?</strong></p><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಚಾ ಆಗಿದ್ದರೆ ‘ಕೆಂಪಣ್ಣ ಆಯೋಗ’ದ ವರದಿ ಬಿಡುಗಡೆ ಮಾಡಲಿ’ ಎಂದು ಜಗದೀಶ ಶೆಟ್ಟರ್ ಸವಾಲು ಹಾಕಿದರು.</p><p>‘ಮುಡಾ’ ಹಗರಣದಲ್ಲಿ ನಾನು ಪ್ರಾಮಾಣಿಕ ಎಂದು ಪದೇಪದೇ ಗಂಟೆ ಹೊಡೆದರೆ ಆಗುವುದಿಲ್ಲ. ಅದರ ಬದಲಾಗಿ, ಪ್ರಾಮಾಣಿಕತೆ ತೋರಿಸುವ ವರದಿ ಬಿಡುಗಡೆ ಮಾಡಿರಿ. ನೀವು ನುಣಿಚಿಕೊಳ್ಳುವುದರಿಂದ ತಪ್ಪು ಮಾಡಿದ್ದು ಗೊತ್ತಾಗುತ್ತಿದೆ’ ಎಂದು ಆರೋಪಿಸಿದರು.</p><p>‘ಪಾದಯಾತ್ರೆ ಮಾಡಿ ಸರ್ಕಾರದ ತಪ್ಪನ್ನು ಜನರ ಮುಂದಿಡುವುದು ನಮ್ಮ ಜವಾಬ್ದಾರಿ. ತಪ್ಪು ಮಾಡಿದವರ ರಾಜೀನಾಮೆ ಕೇಳುತ್ತಿದ್ದೇವೆ. ಅವರಿಗೆ ಧೈರ್ಯವಿದ್ದರೆ ಸಮರ್ಥನೆ ಮಾಡಿಕೊಳ್ಳಬೇಕು, ತಪ್ಪು ಮಾಡಿಲ್ಲವೆಂದು ಸಾಬೀತು ಮಾಡಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲೂ ಅವರ ನೇರ ಕೈವಾಡವಿದೆ’ ಎಂದೂ ದೂರಿದರು.</p><p><strong>‘ಅಣೆಕಟ್ಟೆ ನಿರ್ವಹಣೆಗೂ ದುಡ್ಡಿಲ್ಲ</strong></p><p>‘ರಾಜ್ಯ ಸರ್ಕಾರ ಗ್ಯಾಂಟಿಗಳನ್ನು ಜಾರಿ ಮಾಡುವ ಭರದಲ್ಲಿ ಖಜಾನೆ ಖಾಲಿ ಮಾಡಿದೆ. ಹೊಸ ಅಣೆಕಟ್ಟೆಗಳನ್ನು, ಏತನೀರಾವರಿ ಮಂಜೂರು ಮಾಡುವುದು ದೂರದ ಮಾತು; ಇದ್ದ ಅಣೆಕಟ್ಟೆಗಳನ್ನು ನಿರ್ವಹಣೆ ಮಾಡುವುದಕ್ಕೂ ದುಡ್ಡಿಲ್ಲ. ತುಂಗಭದ್ರಾ ಜಲಾಶಯವೇ ಇದಕ್ಕೆ ಉದಾಹರಣೆ. ಖುದ್ದು ನಾನು ಅಣೆಕಟ್ಟೆ ನೋಡಿ ಬಂದಿದ್ದೇನೆ. ನಿರ್ವಹಣೆ ಮಾಡುವುದಕ್ಕೆ ಸಿಬ್ಬಂದಿ, ಎಂಜಿನಿಯರ್ಗಳೇ ಇಲ್ಲ. ಇದು ಸರ್ಕಾರದ ಸದ್ಯದ ಸ್ಥಿತಿ’ ಎಂದು ಜಗದೀಶ ಶೆಟ್ಟರ್ ಕಿಡಿ ಕಾರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ಕಾರ್ಖಾನೆಗಳಲ್ಲಿ ಯಾವುದೇ ಅವಘಡ ಸಂಭವಿಸಿದಾಗ ಕಾರ್ಮಿಕರ ಪ್ರಾಣ ಹಾನಿ ಆಗದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಯ ಎಲ್ಲ ಕಾರ್ಖಾನೆಗಳ ಮಾಲೀಕರೂ ಇದನ್ನು ಚಾಚೂತಪ್ಪದೇ ಪಾಲಿಸಬೇಕು’ ಎಂದು ಸಂಸದ ಜಗದೀಶ ಶೆಟ್ಟರ್ ಸೂಚಿಸಿದರು.</p><p><strong>ಬೆಳಗಾವಿ </strong>ತಾಲ್ಲೂಕಿನ ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಸ್ನೇಹಂ ಕಾರ್ಖಾನೆಯಲ್ಲಿ ಈಚೆಗೆ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಮಂಗಳವಾರ ಕಾರ್ಖಾನೆಗೆ ಭೇಟಿ ನೀಡಿ ಮಾತನಾಡಿದರು.</p><p>‘ಕಾರ್ಖಾನೆಗಳಲ್ಲಿ ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ. ಮಾರ್ಕಂಡೇಯ ನಗರದ ನಿವಾಸಿ ಯಲಗೊಂಡ ಗುಂಡ್ಯಾಗೋಳ ಅವರು ನಾವಗೆಯ ಕಾರ್ಖಾನೆಯಲ್ಲಿ ಸಜೀವ ದಹನವಾಗದ್ದು ದುಃಖದ ಸಂಗತಿ. ಇಂಥ ಸಂದರ್ಭಗಳಲ್ಲಿ ಕಾರ್ಖಾನೆಗಳ ಮಾಲೀಕರು ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕು’ ಎಂದೂ ತಿಳಿಸಿದರು.</p><p>ಕಾರ್ಖಾನೆಯ ಸುಟ್ಟ ಪ್ರದೇಶವನ್ನು ಪರಿಶೀಲಿಸಿದ ಶೆಟ್ಟರ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾರ್ಕಂಡೇಯ ನಗರಕ್ಕೆ ತೆರಳಿ ಮೃತ ಯಲಗೊಂಡ ಅವರ ತಂದೆ ಸಣ್ಣಯಲ್ಲಪ್ಪ ಅವರಿಗೆ ಸಾಂತ್ವನ ಹೇಳಿದರು.</p><p>ಮಾಜಿ ಶಾಸಕ ಸಂಜಯ ಪಾಟೀಲ, ಮುಖಂಡರಾದ ಧನಂಜಯ ಜಾಧವ್, ಚೇತನ್ ಅಂಗಡಿ, ಹೇಮಂತ ಪಾಟೀಲ, ನಾಗೇಂದ್ರ ದೇಸಾಯಿ, ಸಂತೋಷ ದೇಸಾಯಿ, ಗ್ರಾಮ ಪಂಚಾಯಿತಿಯ ಸದಸ್ಯರು ಇದ್ದರು.</p><p><strong>ನೀವೇನು ಸಾಚಾನಾ?</strong></p><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಚಾ ಆಗಿದ್ದರೆ ‘ಕೆಂಪಣ್ಣ ಆಯೋಗ’ದ ವರದಿ ಬಿಡುಗಡೆ ಮಾಡಲಿ’ ಎಂದು ಜಗದೀಶ ಶೆಟ್ಟರ್ ಸವಾಲು ಹಾಕಿದರು.</p><p>‘ಮುಡಾ’ ಹಗರಣದಲ್ಲಿ ನಾನು ಪ್ರಾಮಾಣಿಕ ಎಂದು ಪದೇಪದೇ ಗಂಟೆ ಹೊಡೆದರೆ ಆಗುವುದಿಲ್ಲ. ಅದರ ಬದಲಾಗಿ, ಪ್ರಾಮಾಣಿಕತೆ ತೋರಿಸುವ ವರದಿ ಬಿಡುಗಡೆ ಮಾಡಿರಿ. ನೀವು ನುಣಿಚಿಕೊಳ್ಳುವುದರಿಂದ ತಪ್ಪು ಮಾಡಿದ್ದು ಗೊತ್ತಾಗುತ್ತಿದೆ’ ಎಂದು ಆರೋಪಿಸಿದರು.</p><p>‘ಪಾದಯಾತ್ರೆ ಮಾಡಿ ಸರ್ಕಾರದ ತಪ್ಪನ್ನು ಜನರ ಮುಂದಿಡುವುದು ನಮ್ಮ ಜವಾಬ್ದಾರಿ. ತಪ್ಪು ಮಾಡಿದವರ ರಾಜೀನಾಮೆ ಕೇಳುತ್ತಿದ್ದೇವೆ. ಅವರಿಗೆ ಧೈರ್ಯವಿದ್ದರೆ ಸಮರ್ಥನೆ ಮಾಡಿಕೊಳ್ಳಬೇಕು, ತಪ್ಪು ಮಾಡಿಲ್ಲವೆಂದು ಸಾಬೀತು ಮಾಡಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲೂ ಅವರ ನೇರ ಕೈವಾಡವಿದೆ’ ಎಂದೂ ದೂರಿದರು.</p><p><strong>‘ಅಣೆಕಟ್ಟೆ ನಿರ್ವಹಣೆಗೂ ದುಡ್ಡಿಲ್ಲ</strong></p><p>‘ರಾಜ್ಯ ಸರ್ಕಾರ ಗ್ಯಾಂಟಿಗಳನ್ನು ಜಾರಿ ಮಾಡುವ ಭರದಲ್ಲಿ ಖಜಾನೆ ಖಾಲಿ ಮಾಡಿದೆ. ಹೊಸ ಅಣೆಕಟ್ಟೆಗಳನ್ನು, ಏತನೀರಾವರಿ ಮಂಜೂರು ಮಾಡುವುದು ದೂರದ ಮಾತು; ಇದ್ದ ಅಣೆಕಟ್ಟೆಗಳನ್ನು ನಿರ್ವಹಣೆ ಮಾಡುವುದಕ್ಕೂ ದುಡ್ಡಿಲ್ಲ. ತುಂಗಭದ್ರಾ ಜಲಾಶಯವೇ ಇದಕ್ಕೆ ಉದಾಹರಣೆ. ಖುದ್ದು ನಾನು ಅಣೆಕಟ್ಟೆ ನೋಡಿ ಬಂದಿದ್ದೇನೆ. ನಿರ್ವಹಣೆ ಮಾಡುವುದಕ್ಕೆ ಸಿಬ್ಬಂದಿ, ಎಂಜಿನಿಯರ್ಗಳೇ ಇಲ್ಲ. ಇದು ಸರ್ಕಾರದ ಸದ್ಯದ ಸ್ಥಿತಿ’ ಎಂದು ಜಗದೀಶ ಶೆಟ್ಟರ್ ಕಿಡಿ ಕಾರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>