ಬೆಳಗಾವಿ: ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಭಾಷಾ ನೀತಿ ಅನುಷ್ಠಾನದಲ್ಲಿ ಜನರು ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿಗೆ ಐವರು ಅಧಿಕಾರೇತರ ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಉಪನ್ಯಾಸಕ ಪ್ರೊ.ರವಿ ಜೆ. ಭಜಂತ್ರಿ, ಲೇಖಕಿ ಸುನಂದಾ ಎಮ್ಮಿ, ಶ್ರೀರಂಗ ಜೋಶಿ, ಕನ್ನಡ ಪ್ರಾಧ್ಯಾಪಕ ಡಾ.ಎಚ್.ಐ. ತಿಮ್ಮಾಪೂರ ಮತ್ತು ಡಾ.ಎ.ಎಲ್. ಕುಲಕರ್ಣಿ ನಾಮನಿರ್ದೇಶನಗೊಂಡವರು. ಇವರೆಲ್ಲರೂ ಇಲ್ಲಿನವರೇ ಆಗಿದ್ದಾರೆ.