ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

PU Result: ಬೆಳಗಾವಿ ಜಿಲ್ಲೆಗೆ ಹಿರಿಮೆ ತಂದ ನಾಲ್ವರು ಗ್ರಾಮೀಣ ವಿದ್ಯಾರ್ಥಿನಿಯರು

Published : 11 ಏಪ್ರಿಲ್ 2024, 5:57 IST
Last Updated : 11 ಏಪ್ರಿಲ್ 2024, 5:57 IST
ಫಾಲೋ ಮಾಡಿ
Comments
ಪ್ರತಿ ಶನಿವಾರ ಲಿಖಿತ ಪರೀಕ್ಷೆ ಸೋಮವಾರ ನೀಟ್‌ ಪರೀಕ್ಷೆ ರೂಢಿ ಮಾಡಿಸಿದ್ದೇವೆ. ನಿರ್ದಿಷ್ಟ ಗ್ರಾಫ್‌ನೊಂದಿಗೆ ಪಾಠ ಪ್ರವಚನ ಮುಗಿಸಿ ರಿವಿಜನ್‌ ಮಾಡಿಸಿದ್ದೇ ಯಶಸ್ಸಿಗೆ ಕಾರಣ
ಎಲ್.ಎನ್.ಬಣಜವಾಡ ಕಾಲೇಜು ಸಂಸ್ಥಾಪಕ
ಹಳ್ಳಿ ಕುಸುಮಗಳಿಗೆ 5ನೇ ರ್‍ಯಾಂಕ್‌
ಸವದತ್ತಿ: ಸವದತ್ತಿಯ ಕುಮಾರೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಕೊಟ್ರೆಪ್ಪ ಗುಲಗಂಜಿ (592) ಅಂಕ ಹಾಗೂ ಮುನವಳ್ಳಿಯ ಅನ್ನದಾನೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗಂಗವ್ವ ನಾಗೇಶ ಸುಣಧೋಳಿ (592) ಇಬ್ಬರೂ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ್‍ಯಾಂಕ್‌ ಪಡೆದಿದ್ದಾರೆ. ‘ನನ್ನ ತಂದೆ– ತಾಯಿ ಕೂಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನವಿದ್ದರೂ ನನ್ನ ಓದಿಗೆ ಏನೂ ಕಡಿಮೆ ಮಾಡಲಿಲ್ಲ. ಕಠಿಣ ಪರಿಶ್ರಮದಿಂದ ಓದಿದ್ದೇನೆ. ನಮ್ಮ ಶ್ರದ್ಧೆ ನಮ್ಮ ಕೈ ಬಿಡುವುದಿಲ್ಲ ಎಂಬುದಕ್ಕೆ ನಾನೇ ಸಾಕ್ಷಿ’ ಎನ್ನವುದು ವಿಜಯಲಕ್ಷ್ಮಿ ಮಾತು. ಕನ್ನಡ ಭೂಗೋಳ ವಿಜ್ಞಾನ ಶಿಕ್ಷಣಶಾಸ್ತ್ರ ವಿಷಯಗಳಲ್ಲಿ ನೂರಕ್ಕೆ 100 ಹಿಂದಿ 96 ಇತಿಹಾಸ 98 ರಾಜ್ಯಶಾಸ್ತ್ರದಲ್ಲಿ 98 ಅಂಕಗಳನ್ನು ಅವರು ಪಡೆದಿದ್ದಾರೆ. ಐಎಎಸ್‌ ಮಾಡಬೇಕು ಎಂಬದು ಅವರ ಮುಂದಿನ ಗುರಿ. ಮುನವಳ್ಳಿಯ ಗಂಗವ್ವ ನಾಗೇಶ ಸುಣಧೋಳಿ ಅವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದರೂ ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ. ನಿರಂತರ ಓದಿನಿಂದಲೇ ಯಶಸ್ಸಿ ಸಾಧಿಸಿದ್ದೇನೆ ಎಂಬುದು ಅವರ ಮನದಾಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT