ವಿಮರ್ಶಕಿ ಎಂ.ಎಸ್.ಆಶಾದೇವಿ ಈ ಕಮ್ಮಟಕದ ನಿರ್ದೇಶಕಿ ಆಗಿದ್ದಾರೆ. ಕೆ.ವೈ.ನಾರಾಯಣಸ್ವಾಮಿ, ಶ್ರೀಪಾದ ಭಟ್, ಹೇಮಾ ಪಟ್ಟಣಶೆಟ್ಟಿ, ರಾಮಕೃಷ್ಣ ಮರಾಠೆ, ಪ್ರಕಾಶ್ ಗರುಡ ಮತ್ತು ರಜನಿ ಗರುಡ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. 30 ಜನರಿಗೆ ಮಾತ್ರ ಅವಕಾಶವಿದೆ. ಜನವರಿ 7 ಅರ್ಜಿ ಸಲ್ಲಿಸಲು ಕೊನೆಯ ದಿನ. ಆಯ್ಕೆಯಾದವರಿಗೆ ಊಟ, ವಸತಿ ಸೇರಿ ಕಮ್ಮಟದ ಪ್ರವೇಶ ಶುಲ್ಕ ₹2,000. ಆಸಕ್ತರು ehottige.ks@gmail.com ಈ ವಿಳಾಸಕ್ಕೆ ಪರಿಚಯ, ಸಂಪರ್ಕ ಸಂಖ್ಯೆ, ಭಾವಚಿತ್ರ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.