<p><strong>ತೆಲಸಂಗ: </strong>‘ಗಾಂಧೀಜಿ ಮೊದಲಾದ ಮಹಾತ್ಮರ ಜೀವನವನ್ನು ಮೆಲಕು ಹಾಕುವುದರೊಂದಿಗೆ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಬಿಜೆಪಿ ಒಬಿಸಿ ಮೋರ್ಚಾ ಚಿಕ್ಕೋಡಿ ಜಿಲ್ಲಾ ಘಟಕದ ಸಂಚಾಲಕ ಆನಂದ ಥೈಕಾರ ಹೇಳಿದರು.</p>.<p>ಬಿಜೆಪಿ ಒಬಿಸಿ ಮೋರ್ಚಾದಿಂದ ಗ್ರಾಮದ ಜ್ಞಾನಭಾರತಿ ಶಾಲೆಯಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಖಾದಿ ಟವೆಲ್ ಮತ್ತು ಸಿಹಿ ವಿತರಿಸಿ ಮಾತನಾಡಿದರು.</p>.<p>‘ಆಚರಣೆಗಳನ್ನು ಕಾಟಾಚಾರಕ್ಕೆ ಮಾಡಬಾರದು. ಸರಕಾರದ ಆದೇಶಕ್ಕಾಗಿ ಆಚರಿಸುವ ಜಯಂತಿಗಳು ಯಾವ ಪರಿಣಾಮವನ್ನೂ ಬೀರಲಾರವು. ಗಾಂಧೀಜಿ ಕನಸುಗಳನ್ನು ನನಸಾಗಿಸಲು ನಾವೆಲ್ಲರೂ ಮುಂದಾಗಬೇಕು’ ಎಂದು ಆಶಿಸಿದರು.</p>.<p>ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಶೆಲ್ಲೆಪ್ಪಗೋಳ, ಕಾರ್ಯದರ್ಶೀ ಜಗದೀಶ ಮಠದ, ಗೋಪಾಲ ಶೆಲ್ಲೆಪ್ಪಗೋಳ, ರಾಜು ಕಲಾಲ, ಗಪೂರ ಮುಲ್ಲಾ, ಸಹ ಸಂಚಾಲಕ ಬಸವರಾಜ ಅಸ್ಕಿ ಉಪಸ್ಥಿತರಿದ್ದರು.</p>.<p><strong>ಖವಟಕೊಪ್ಪದಲ್ಲಿ ಆಚರಣೆ<br />ಖವಟಕೊಪ್ಪ: </strong>ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.</p>.<p>ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಮ ಪಂಚಾಯ್ತಿ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮಕ್ಕಳು ಇದ್ದರು.</p>.<p><strong>ಶಿವಪುತ್ರ ನೇಮಕ<br />ನಾಗರಮುನ್ನೋಳಿ: </strong>ಗ್ರಾಮದ ಮುಖಂಡ ಶಿವಪುತ್ರ ಮನಗೂಳಿ ಅವರನ್ನು ಕಾಂಗ್ರೆಸ್ ಚಿಕ್ಕೋಡಿ ರೈತ ಮತ್ತು ರೈತ ಕಾರ್ಮಿಕರ ಜಿಲ್ಲಾ ಘಟಕದಪ್ರಧಾನ ಕಾರ್ಯದರ್ಶೀಯಾಗಿ ನೇಮಕ ಮಾಡಲಾಗಿದೆ.</p>.<p>ಆದೇಶಪತ್ರವನ್ನು ಶಾಸಕ ಗಣೇಶ ಹುಕ್ಕೇರಿ ಈಚೆಗೆ ವಿತರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಹಾವೀರ ಮೋಹಿತೆ, ಸಿದ್ದಪ್ಪ ಮರ್ಯಾಯಿ, ಮಿಲನ ಪಾಟೀಲ, ಎಚ್.ಎಸ್. ನಸಲಾಪುರೆ, ಶಂಕರಗೌಡ ಪಾಟೀಲ, ಗುಲಾಬ ಬಾಗವಾನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಲಸಂಗ: </strong>‘ಗಾಂಧೀಜಿ ಮೊದಲಾದ ಮಹಾತ್ಮರ ಜೀವನವನ್ನು ಮೆಲಕು ಹಾಕುವುದರೊಂದಿಗೆ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಬಿಜೆಪಿ ಒಬಿಸಿ ಮೋರ್ಚಾ ಚಿಕ್ಕೋಡಿ ಜಿಲ್ಲಾ ಘಟಕದ ಸಂಚಾಲಕ ಆನಂದ ಥೈಕಾರ ಹೇಳಿದರು.</p>.<p>ಬಿಜೆಪಿ ಒಬಿಸಿ ಮೋರ್ಚಾದಿಂದ ಗ್ರಾಮದ ಜ್ಞಾನಭಾರತಿ ಶಾಲೆಯಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಖಾದಿ ಟವೆಲ್ ಮತ್ತು ಸಿಹಿ ವಿತರಿಸಿ ಮಾತನಾಡಿದರು.</p>.<p>‘ಆಚರಣೆಗಳನ್ನು ಕಾಟಾಚಾರಕ್ಕೆ ಮಾಡಬಾರದು. ಸರಕಾರದ ಆದೇಶಕ್ಕಾಗಿ ಆಚರಿಸುವ ಜಯಂತಿಗಳು ಯಾವ ಪರಿಣಾಮವನ್ನೂ ಬೀರಲಾರವು. ಗಾಂಧೀಜಿ ಕನಸುಗಳನ್ನು ನನಸಾಗಿಸಲು ನಾವೆಲ್ಲರೂ ಮುಂದಾಗಬೇಕು’ ಎಂದು ಆಶಿಸಿದರು.</p>.<p>ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಶೆಲ್ಲೆಪ್ಪಗೋಳ, ಕಾರ್ಯದರ್ಶೀ ಜಗದೀಶ ಮಠದ, ಗೋಪಾಲ ಶೆಲ್ಲೆಪ್ಪಗೋಳ, ರಾಜು ಕಲಾಲ, ಗಪೂರ ಮುಲ್ಲಾ, ಸಹ ಸಂಚಾಲಕ ಬಸವರಾಜ ಅಸ್ಕಿ ಉಪಸ್ಥಿತರಿದ್ದರು.</p>.<p><strong>ಖವಟಕೊಪ್ಪದಲ್ಲಿ ಆಚರಣೆ<br />ಖವಟಕೊಪ್ಪ: </strong>ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.</p>.<p>ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಮ ಪಂಚಾಯ್ತಿ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮಕ್ಕಳು ಇದ್ದರು.</p>.<p><strong>ಶಿವಪುತ್ರ ನೇಮಕ<br />ನಾಗರಮುನ್ನೋಳಿ: </strong>ಗ್ರಾಮದ ಮುಖಂಡ ಶಿವಪುತ್ರ ಮನಗೂಳಿ ಅವರನ್ನು ಕಾಂಗ್ರೆಸ್ ಚಿಕ್ಕೋಡಿ ರೈತ ಮತ್ತು ರೈತ ಕಾರ್ಮಿಕರ ಜಿಲ್ಲಾ ಘಟಕದಪ್ರಧಾನ ಕಾರ್ಯದರ್ಶೀಯಾಗಿ ನೇಮಕ ಮಾಡಲಾಗಿದೆ.</p>.<p>ಆದೇಶಪತ್ರವನ್ನು ಶಾಸಕ ಗಣೇಶ ಹುಕ್ಕೇರಿ ಈಚೆಗೆ ವಿತರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಹಾವೀರ ಮೋಹಿತೆ, ಸಿದ್ದಪ್ಪ ಮರ್ಯಾಯಿ, ಮಿಲನ ಪಾಟೀಲ, ಎಚ್.ಎಸ್. ನಸಲಾಪುರೆ, ಶಂಕರಗೌಡ ಪಾಟೀಲ, ಗುಲಾಬ ಬಾಗವಾನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>