‘ಗಣೇಶ ಮೂರ್ತಿ ಎಂದರೆ ಅವನದೊಂದೇ ಅಲ್ಲ, ಆ ಕಥೆಗೆ, ಆ ಪರಿಕಲ್ಪನೆಗೆ ಪೂರಕವಾಗಿ ಇತರ ಮೂರ್ತಿಗಳನ್ನು ಮಾಡಬೇಕಾಗುತ್ತದೆ. ಸಿಂಹಾಸನ ಏರಿದ ಗಣೇಶನನ್ನು ತಯಾರಿಸಬೇಕಾದರೆ, ಎತ್ತರದ ಪೀಠ, ಕಿರೀಟ ಎಲ್ಲವನ್ನೂ ಸೇರಿಸಿ ಮಾಡಬೇಕಾಗುತ್ತದೆ. ಕೊರೊನಾ ವೈರಾಣುವಿನಿಂದ ಜಗತ್ತನ್ನು ರಕ್ಷಿಸುವ ಪರಿಕಲ್ಪನೆಯಡಿ ಗಣೇಶ ಮೂರ್ತಿ ತಯಾರಿಸುವಾಗ ಸಹಜವಾಗಿ ಮೂರ್ತಿ ಎತ್ತರವಾಗುತ್ತದೆ. ಈಗ ಕೊನೆಯ ಕ್ಷಣದಲ್ಲಿ ಎತ್ತರದ ಮೇಲೆ ನಿರ್ಬಂಧ ಹೇರಿದರೆ ಹೇಗೆ? ಮುಂಚಿತವಾಗಿ ತಿಳಿಸಿದ್ದರೆ ಆ ಎತ್ತರಕ್ಕೆ ತಕ್ಕಂತೆ ಮಾಡುತ್ತಿದ್ದೇವು. ಈಗ ಮೂರ್ತಿ ತಯಾರಾಗಿದ್ದು ಇವುಗಳಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಸರ್ಕಾರ ದಯವಿಟ್ಟು ನಿರ್ಬಂಧವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಕೋರಿಕೊಂಡಿದ್ದಾರೆ.