ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಥಣಿ: ಸಿಡಿಲು ಬಡಿದು ಇಬ್ಬರ ಸಾವು

Published 30 ಮೇ 2023, 15:24 IST
Last Updated 30 ಮೇ 2023, 15:24 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ): ತಾಲ್ಲೂಕಿನ ಎರಡು ಕಡೆ ಮಂಗಳವಾರ ಸಂಜೆ ಸಿಡಿಲೆರಗಿ ಒಬ್ಬ ಯುವಕ ಹಾಗೂ ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಕಮರಿಯ ಅಮೂಲ್‌ ಜೈಸಿಂಗ್‌ (24) ಹಾಗೂ ದೇಸರಹಟ್ಟಿಯ ವಿಠ್ಠಾಬಾಯಿ ಕಮಕಾರ (50) ಮೃತಪಟ್ಟವರು.

ಅಮೂಲ್ ಅವರು ಎಂದಿನಂತೆ ಮಂಗಳವಾರ ಕೂಡ ಕುರಿ ಕಾಯುತ್ತಿದ್ದರು. ಏಕಾಏಕಿ ಮಳೆ, ಬಿರುಗಾಳಿ ಆರಂಭವಾಯಿತು. ಆಗ ಅಮೂಲ್‌ ಮರದಡಿ ಹೋಗಿ ನಿಂತರು. ನೇರವಾಗಿ ಅವರಿಗೆ ಸಿಡಿಲೆರಗಿ, ಸ್ಥಳದಲ್ಲೇ ಅಸುನೀಗಿದರು.

ವಿಠ್ಠಾಬಾಯಿ ಕೂಡ ತಮ್ಮ ಹೊಲದಲ್ಲಿ ಅರಿಸಿನ ಫಸಲು ಸಂಸ್ಕರಣೆ ಮಾಡುತ್ತಿದ್ದ ವೇಳೆ ಸಿಡಿಲೆರಗಿತು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT