‘ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಯುವರಾಜ್ (ಸ್ವಾಮಿ) ನನ್ನನ್ನೂ ಒಂದೆರಡು ಬಾರಿ ಭೇಟಿಯಾಗಿದ್ದ. ಆದರೆ, ಫೋಟೊ ತೆಗೆಸಿಕೊಂಡಿಲ್ಲ. ಉನ್ನತ ಸ್ಥಾನದಲ್ಲಿರುತ್ತೇವೆ ಎಂದು ಹಲವರು ಬಂದು ಭೇಟಿಯಾಗುತ್ತಾರೆ. ಫೋಟೊ ತೆಗೆಸಿಕೊಳ್ಳುತ್ತಾರೆ. ಹಾಗೆಂದ ಮಾತ್ರಕ್ಕೆ ಮಂತ್ರಿಗಳೆಲ್ಲರೂ ಆರೋಪಿಗಳು ಎಂದು ಮಾಧ್ಯಮದಲ್ಲಿ ಬಿಂಬಿಸುವುದು ತಪ್ಪು’ ಎಂದರು.