‘ನಿಪ್ಪಾಣಿಯ ವಿಎಸ್ಎಂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನನಗೆ ಕನ್ನಡದ ಬಗ್ಗೆ ಅಪಾರ ಅಭಿಮಾನವಿದೆ. ಪತ್ನಿಯೂ ಕನ್ನಡಾಭಿಮಾನಿ. ಕನ್ನಡತಿ ಧಾರಾವಾಹಿ ಕುರಿತು ಅಭಿಪ್ರಾಯ ಸಂಗ್ರಹಿಸಲು ಚಿಕ್ಕೋಡಿಗೆ ಬಂದಿದ್ದ ಪ್ರವೀಣ ಎನ್ನುವವರ ಎದುರು ತಮ್ಮ ಮಗಳಿಗೆ ‘ಕನ್ನಡದ ವೃದ್ಧಿ’ ಎಂದು ನಾಮಕರಣ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದೇವು. ಅದು ಸಾಕಾರಗೊಂಡಿತು. ನಾಮಕರಣ ಕಾರ್ಯಕ್ರಮ ಜ. 15,16, 17ರಂದು ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ’ ಎಂದು ಸಿದಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.