<p><strong>ಚಿಕ್ಕೋಡಿ:</strong> ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ತಾಲ್ಲೂಕಿನ ಕರಗಾಂವ ಏತ ನೀರಾವರಿ ಯೋಜನೆ ಕೊನೆಗೂ ಕೈಗೂಡುವ ಕಾಲ ಬಂದಿದೆ. 14 ಗ್ರಾಮಗಳ 8,390 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಭಾಗ್ಯ ನೀಡುವ ಈ ಯೋಜನೆಗೆ ₹567 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಗುರುವಾರ (ಡಿ.4) ಇದಕ್ಕೆ ಚಾಲನೆ ನೀಡಲಾಗುತ್ತಿದೆ.</p>.<p>ಕರಗಾಂವ, ಕರೋಶಿ, ಡೋಣವಾಡ, ಬಂಬಲವಾಡ, ಬೆಣ್ಣಿಹಳ್ಳಿ, ಕಮತ್ಯಾನಟ್ಟಿ, ನಾಗರಮುನ್ನೋಳಿ, ಉಮರಾಣಿ, ಕಬ್ಬೂರ, ಬೆಳಕೂಡ, ಮುಗಳಿ, ಹಂಚಿನಾಳ, ಇಟ್ನಾಳ, ಕುಂಗಟೋಳ್ಳಿ ಗ್ರಾಮಗಳ ಜಮೀನು ಕರಗಾಂವ ಏತನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಲ್ಲಿ ಹಸಿರಿನಿಂದ ಕಂಗೊಳಿಸಲಿದೆ.</p>.<p>ಶಾಸಕ ದುರ್ಯೋಧನ ಐಹೊಳೆ ಪ್ರಯತ್ನದಿಂದ ಮೇ ತಿಂಗಳಲ್ಲಿ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ₹100 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧಗೊಳಿಸಲಾಗಿದೆ. ಮೊದಲ ಹಂತದಲ್ಲಿ ಜಾಕ್ವೆಲ್ ನಿರ್ಮಾಣ, ವಿದ್ಯುತ್ ಸಂಪರ್ಕ ಹಾಗೂ ಸಂಬಂಧಿತ ಕಾಮಗಾರಿ ಹಾಗೂ 4 ಕಿ.ಮೀ ಪೈಪಲೈನ್ ಮಾಡಲಾಗುತ್ತಿದೆ. ₹467 ಕೋಟಿ ಮೊತ್ತದಲ್ಲಿ 2ನೇ ಹಂತದಲ್ಲಿ ಇನ್ನುಳಿದ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ.</p>.<p>ಇದಕ್ಕೆ ಕೃಷ್ಣಾ ನದಿಯಿಂದ 0.77 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ.</p>.<div><blockquote>ಕರಗಾಂವ ಏತ ನೀರಾವರಿ ಯೋಜನೆ ನನ್ನ ಮುಖ್ಯ ಯೋಜನೆ. ಕೆಲವೇ ವರ್ಷಗಳಲ್ಲಿ ಈ ಭಾಗದ ಜಮೀನು ಹಸಿರಿನಿಂದ ಕಂಗೊಳಿಸಲಿದೆ </blockquote><span class="attribution">–ದುರ್ಯೋಧನ ಐಹೊಳೆ, ಶಾಸಕ ರಾಯಬಾಗ</span></div>.<div><blockquote>ಏತ ನೀರಾವರಿಗೆ ಆಗ್ರಹಿಸಿ ಡಿ.4ರಂದು ಬಂದ್ ಕರೆ ನೀಡಿದ್ದೇವು. ರೈತರ ಒಗ್ಗಟ್ಟಿಗೆ ಮಣಿದ ಸರ್ಕಾರ ಕೊನೆಗೂ ಬೇಡಿಕೆ ಈಡೇರಿಸಿದೆ </blockquote><span class="attribution">–ಗಜಾನಂದ ದಾನನ್ನವರ, ರೈತ ಉಮರಾಣಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ:</strong> ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ತಾಲ್ಲೂಕಿನ ಕರಗಾಂವ ಏತ ನೀರಾವರಿ ಯೋಜನೆ ಕೊನೆಗೂ ಕೈಗೂಡುವ ಕಾಲ ಬಂದಿದೆ. 14 ಗ್ರಾಮಗಳ 8,390 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಭಾಗ್ಯ ನೀಡುವ ಈ ಯೋಜನೆಗೆ ₹567 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಗುರುವಾರ (ಡಿ.4) ಇದಕ್ಕೆ ಚಾಲನೆ ನೀಡಲಾಗುತ್ತಿದೆ.</p>.<p>ಕರಗಾಂವ, ಕರೋಶಿ, ಡೋಣವಾಡ, ಬಂಬಲವಾಡ, ಬೆಣ್ಣಿಹಳ್ಳಿ, ಕಮತ್ಯಾನಟ್ಟಿ, ನಾಗರಮುನ್ನೋಳಿ, ಉಮರಾಣಿ, ಕಬ್ಬೂರ, ಬೆಳಕೂಡ, ಮುಗಳಿ, ಹಂಚಿನಾಳ, ಇಟ್ನಾಳ, ಕುಂಗಟೋಳ್ಳಿ ಗ್ರಾಮಗಳ ಜಮೀನು ಕರಗಾಂವ ಏತನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಲ್ಲಿ ಹಸಿರಿನಿಂದ ಕಂಗೊಳಿಸಲಿದೆ.</p>.<p>ಶಾಸಕ ದುರ್ಯೋಧನ ಐಹೊಳೆ ಪ್ರಯತ್ನದಿಂದ ಮೇ ತಿಂಗಳಲ್ಲಿ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ₹100 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧಗೊಳಿಸಲಾಗಿದೆ. ಮೊದಲ ಹಂತದಲ್ಲಿ ಜಾಕ್ವೆಲ್ ನಿರ್ಮಾಣ, ವಿದ್ಯುತ್ ಸಂಪರ್ಕ ಹಾಗೂ ಸಂಬಂಧಿತ ಕಾಮಗಾರಿ ಹಾಗೂ 4 ಕಿ.ಮೀ ಪೈಪಲೈನ್ ಮಾಡಲಾಗುತ್ತಿದೆ. ₹467 ಕೋಟಿ ಮೊತ್ತದಲ್ಲಿ 2ನೇ ಹಂತದಲ್ಲಿ ಇನ್ನುಳಿದ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ.</p>.<p>ಇದಕ್ಕೆ ಕೃಷ್ಣಾ ನದಿಯಿಂದ 0.77 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ.</p>.<div><blockquote>ಕರಗಾಂವ ಏತ ನೀರಾವರಿ ಯೋಜನೆ ನನ್ನ ಮುಖ್ಯ ಯೋಜನೆ. ಕೆಲವೇ ವರ್ಷಗಳಲ್ಲಿ ಈ ಭಾಗದ ಜಮೀನು ಹಸಿರಿನಿಂದ ಕಂಗೊಳಿಸಲಿದೆ </blockquote><span class="attribution">–ದುರ್ಯೋಧನ ಐಹೊಳೆ, ಶಾಸಕ ರಾಯಬಾಗ</span></div>.<div><blockquote>ಏತ ನೀರಾವರಿಗೆ ಆಗ್ರಹಿಸಿ ಡಿ.4ರಂದು ಬಂದ್ ಕರೆ ನೀಡಿದ್ದೇವು. ರೈತರ ಒಗ್ಗಟ್ಟಿಗೆ ಮಣಿದ ಸರ್ಕಾರ ಕೊನೆಗೂ ಬೇಡಿಕೆ ಈಡೇರಿಸಿದೆ </blockquote><span class="attribution">–ಗಜಾನಂದ ದಾನನ್ನವರ, ರೈತ ಉಮರಾಣಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>