ಉದ್ಯಮಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಎಲೆಕ್ಟ್ರಾನಿಕ್ಸ್, ಐಟಿ–ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ‘ಉತ್ಪಾದನೆಗೆ ಅನುಕೂಲಕರ ಪರಿಸರ ಸೃಷ್ಟಿ ಮಾಡುವುದು ನಮ್ಮ ಉದ್ದೇಶ. ದೇಶದ ಡಿಜಿಟಲೀಕರಣಕ್ಕೆ ಕೊಡುಗೆ ನೀಡಲಿದೆ. ಸ್ಥಳೀಯ ಕೈಗಾರಿಕೋದ್ಯಮಿಗಳಿಗೆ ಉತ್ತೇಜನ ನೀಡುವುದು, ಜಾಗತಿಕ ಬಂಡವಾಳ ಹೂಡಿಕೆದಾರನ್ನು ಸೆಳೆಯುವುದು, ವಿಶ್ವವ್ಯಾಪ್ತಿಯಲ್ಲಿ ಪೂರೈಕೆ ಜಾಲ ಸೃಷ್ಟಿಸುವುದು, ಸ್ಥಳೀಯ ಪ್ರತಿಭೆಗಳ ಕೌಶಲಕ್ಕೆ ವೇದಿಕೆ ಕಲ್ಪಿಸುವುದು ಇದರಲ್ಲಿ ಸೇರಿವೆ’ ಎಂದರು.