<p><strong>ಬೆಳಗಾವಿ:</strong> ‘ಜಿಲ್ಲೆಯಲ್ಲಿ ಸೋಯಾಅವರೆಯನ್ನು ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗುತ್ತಿದೆ. ಈ ಭಾಗದ ಬಿತ್ತನೆ ಬೀಜ ಬೇಡಿಕೆಯನ್ನು ಪೂರೈಸಲು ಹಿಂಗಾರು ಹಂಗಾಮಿನಲ್ಲಿ ಬೀಜೋತ್ಪಾದನೆ ಕಾರ್ಯಕ್ರಮ ಆರಂಭಿಸಲಾಗುವುದು’ ಎಂದು ಇಂದೋರ್ನ ಐಸಿಎಆರ್-ಭಾರತೀಯ ಸೋಯಾಅವರೆ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ನೀತಾ ಖಾಂಡೇಕರ ತಿಳಿಸಿದರು.</p>.<p>ಬೈಲಹೊಂಗಲ ತಾಲ್ಲೂಕಿನ ಮತ್ತಿಕೊಪ್ಪದ ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಚಚಡಿಯ ಸರ್ದಾರ್ ವಿ.ಜಿ. ದೇಸಾಯಿ ಪ್ರತಿಷ್ಠಾನದ ಸಹಯೋಗದಲ್ಲಿ ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ದೇಸಾಯಿ ವಾಡೆಯಲ್ಲಿ ನಡೆದ ಸೋಯಾಅವರೆ ಹಾಗೂ ಗೋಧಿ ಬೆಳೆಗಳ ಕುರಿತ ಕಿಸಾನ್ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷ ಹಾಗೂ ಕೆಎಲ್ಇ ಸಂಸ್ಥೆಯ ನಿರ್ದೇಶಕ ಬಿ.ಆರ್. ಪಾಟೀಲ ಮಾತನಾಡಿ, ‘ಕೃಷಿ ವಿಜ್ಞಾನ ಕೇಂದ್ರದಿಂದ ಸೋಯಾಅವರೆ ಹಾಗೂ ಗೋಧಿ ಬೆಳೆಗಳ ಅಧಿಕ ಇಳುವರಿ ನೀಡುವ ವಿವಿಧ ತಳಿಗಳ ಪ್ರಯೋಗ ನಡೆಯುತ್ತಿದೆ. ಈ ವಲಯಕ್ಕೆ ಸೂಕ್ತ ತಳಿಯ ಬೀಜೋತ್ಪಾದನೆ ಕೈಗೊಂಡು ಈ ಭಾಗದ ರೈತರಿಗೆ ನೀಡುವ ಕೆಲಸವನ್ನು ಕೇಂದ್ರ ಮಾಡಲಿದೆ’ ಎಂದು ಹೇಳಿದರು.</p>.<p><strong>ಕೋರೆ ಕಾರಣ: </strong>‘ಈ ಭಾಗದಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿ ಕೆಎಲ್ಇ ಸಂಸ್ಥೆಯು ರೈತರಿಗೆ ಸೇವೆ ಸಲ್ಲಿಸಲು ಕೃಷಿ ಪ್ರೇಮಿ ಪ್ರಭಾಕರ ಕೋರೆ ಕಾರಣರಾಗಿದ್ದಾರೆ. ಚಚಡಿಯ ದೇಸಾಯಿ ಮನೆತನವು ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ ಮತ್ತು ಐತಿಹಾಸಿಕವಾಗಿದೆ. ಇಂದಿಗೂ ಈ ಗ್ರಾಮದಲ್ಲಿ ನಾಗರಾಜ ದೇಸಾಯಿ ಅವರುಸಮಾಜ ಸೇವೆ ಮುಂದುವರಿಸಿರುವುದು ಅಭಿನಂದನಾರ್ಹ’ ಎಂದು ತಿಳಿಸಿದರು.</p>.<p>ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಆರ್.ಆರ್. ಹಂಚಿನಾಳ ಗೋಧಿ ತಳಿಗಳ ಕುರಿತು ವಿವರಿಸಿದರು. ಸಹ ವಿಸ್ತರಣಾ ನಿರ್ದೇಶಕ ಡಾ.ಪಿ.ಎಸ್. ಹೂಗಾರ ಗೋಧಿ ಮತ್ತು ಸೋಯಾಅವರೆಯಲ್ಲಿ ಕಂಡು ಬರುವ ರೋಗ, ಕೀಟದ ನಿರ್ವಹಣೆ ಕುರಿತು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.</p>.<p>ಕೃಷಿ ವಿಜ್ಞಾನ ಕೇಂದ್ರದ ಸಲಹೆಗಾರ ಡಾ.ವಿ.ಎಸ್. ಕೋರಿಕಂಥಿಮಠ, ‘ರೈತರು ಹೆಚ್ಚು ಆದಾಯ ಪಡೆಯಲು ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು’ ಎಂದು ಸಲಹೆ ನೀಡಿದರು.</p>.<p><strong>ಮೌಲ್ಯವರ್ಧಿಸಿ: </strong>ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ‘ರೈತರು ಉತ್ಪಾದಕರ ಕಂಪನಿಯನ್ನು ಪ್ರಾರಂಭಿಸಿ ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಮೌಲ್ಯವರ್ಧಿಸಿ ಹೆಚ್ಚು ಆದಾಯ ಪಡೆಯಬೇಕು’ ಎಂದು ತಿಳಿಸಿದರು.</p>.<p>ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಬೆಂಗಳೂರಿನ ‘ಅಟಾರಿ’ ಸಂಸ್ಥೆಯ ನಿರ್ದೇಶಕ ಡಾ.ವಿ. ವೆಂಕಟಸುಬ್ರಮಣಿಯನ್, ‘ರೈತರು ಕೃಷಿ ವಿಜ್ಞಾನ ಕೇಂದ್ರದಿಂದ ತಂತ್ರಜ್ಞಾನ ಮಾರ್ಗದರ್ಶನ ಪಡೆದು ಅಧಿಕ ಇಳುವರಿ ಪಡೆಯಲು ಪ್ರಯತ್ನಿಸಬೇಕು’ ಎಂದರು.</p>.<p>ಇದೇ ವೇಳೆ, ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಕಟಗೊಂಡ ಸೋಯಾಅವರೆ ಬೆಳೆಯ ತಾಂತ್ರಿಕತೆ ಹಾಗೂ ಕೃಷಿ ಕಾಯ್ದೆ 2020 ಕುರಿತ ಹಸ್ತಪ್ರತಿಗಳನ್ನು ಬಿಡುಗಡೆ ಮಾಡಲಾಯಿತು. ವಿವಿಧ ಗೋಧಿ ತಳಿಗಳ ಪರೀಕ್ಷಾ ತಾಕುಗಳಿಗೆ ಭೇಟಿ ನೀಡಲಾಯಿತು.</p>.<p>ಗೋಧಿ ತಳಿ ವಿಜ್ಞಾನಿ ಸುಮಾ ಬಿರಾದಾರ ಬೆಳೆಯ ತಾಂತ್ರಿಕತೆಗಳನ್ನು ವಿವರಿಸಿದರು. ಸೋಯಾಅವರೆ ಸಂಶೋಧನಾ ಸಂಸ್ಥೆಯ ಡಾ.ಸಂಜೀವ ಗುಪ್ತಾ, ಉಪ ಕೃಷಿ ನಿರ್ದೇಶಕ ಎಚ್.ಡಿ. ಕೋಳೇಕರ, ಉದಯಕುಮಾರ ದೇಸಾಯಿ, ವಿಜ್ಞಾನಿಗಳಾದ ಜಿ.ಬಿ. ವಿಶ್ವನಾಥ, ಡಾ.ಎಸ್.ಎಸ್. ಹಿರೇಮಠ ಇದ್ದರು.</p>.<p>ವಿಜ್ಞಾನಿ ಎಸ್.ಎಂ. ವಾರದ ಸ್ವಾಗತಿಸಿದರು. ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥೆ ಶ್ರೀದೇವಿ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ದೇಸಾಯಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಜಿಲ್ಲೆಯಲ್ಲಿ ಸೋಯಾಅವರೆಯನ್ನು ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗುತ್ತಿದೆ. ಈ ಭಾಗದ ಬಿತ್ತನೆ ಬೀಜ ಬೇಡಿಕೆಯನ್ನು ಪೂರೈಸಲು ಹಿಂಗಾರು ಹಂಗಾಮಿನಲ್ಲಿ ಬೀಜೋತ್ಪಾದನೆ ಕಾರ್ಯಕ್ರಮ ಆರಂಭಿಸಲಾಗುವುದು’ ಎಂದು ಇಂದೋರ್ನ ಐಸಿಎಆರ್-ಭಾರತೀಯ ಸೋಯಾಅವರೆ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ನೀತಾ ಖಾಂಡೇಕರ ತಿಳಿಸಿದರು.</p>.<p>ಬೈಲಹೊಂಗಲ ತಾಲ್ಲೂಕಿನ ಮತ್ತಿಕೊಪ್ಪದ ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಚಚಡಿಯ ಸರ್ದಾರ್ ವಿ.ಜಿ. ದೇಸಾಯಿ ಪ್ರತಿಷ್ಠಾನದ ಸಹಯೋಗದಲ್ಲಿ ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ದೇಸಾಯಿ ವಾಡೆಯಲ್ಲಿ ನಡೆದ ಸೋಯಾಅವರೆ ಹಾಗೂ ಗೋಧಿ ಬೆಳೆಗಳ ಕುರಿತ ಕಿಸಾನ್ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷ ಹಾಗೂ ಕೆಎಲ್ಇ ಸಂಸ್ಥೆಯ ನಿರ್ದೇಶಕ ಬಿ.ಆರ್. ಪಾಟೀಲ ಮಾತನಾಡಿ, ‘ಕೃಷಿ ವಿಜ್ಞಾನ ಕೇಂದ್ರದಿಂದ ಸೋಯಾಅವರೆ ಹಾಗೂ ಗೋಧಿ ಬೆಳೆಗಳ ಅಧಿಕ ಇಳುವರಿ ನೀಡುವ ವಿವಿಧ ತಳಿಗಳ ಪ್ರಯೋಗ ನಡೆಯುತ್ತಿದೆ. ಈ ವಲಯಕ್ಕೆ ಸೂಕ್ತ ತಳಿಯ ಬೀಜೋತ್ಪಾದನೆ ಕೈಗೊಂಡು ಈ ಭಾಗದ ರೈತರಿಗೆ ನೀಡುವ ಕೆಲಸವನ್ನು ಕೇಂದ್ರ ಮಾಡಲಿದೆ’ ಎಂದು ಹೇಳಿದರು.</p>.<p><strong>ಕೋರೆ ಕಾರಣ: </strong>‘ಈ ಭಾಗದಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿ ಕೆಎಲ್ಇ ಸಂಸ್ಥೆಯು ರೈತರಿಗೆ ಸೇವೆ ಸಲ್ಲಿಸಲು ಕೃಷಿ ಪ್ರೇಮಿ ಪ್ರಭಾಕರ ಕೋರೆ ಕಾರಣರಾಗಿದ್ದಾರೆ. ಚಚಡಿಯ ದೇಸಾಯಿ ಮನೆತನವು ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ ಮತ್ತು ಐತಿಹಾಸಿಕವಾಗಿದೆ. ಇಂದಿಗೂ ಈ ಗ್ರಾಮದಲ್ಲಿ ನಾಗರಾಜ ದೇಸಾಯಿ ಅವರುಸಮಾಜ ಸೇವೆ ಮುಂದುವರಿಸಿರುವುದು ಅಭಿನಂದನಾರ್ಹ’ ಎಂದು ತಿಳಿಸಿದರು.</p>.<p>ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಆರ್.ಆರ್. ಹಂಚಿನಾಳ ಗೋಧಿ ತಳಿಗಳ ಕುರಿತು ವಿವರಿಸಿದರು. ಸಹ ವಿಸ್ತರಣಾ ನಿರ್ದೇಶಕ ಡಾ.ಪಿ.ಎಸ್. ಹೂಗಾರ ಗೋಧಿ ಮತ್ತು ಸೋಯಾಅವರೆಯಲ್ಲಿ ಕಂಡು ಬರುವ ರೋಗ, ಕೀಟದ ನಿರ್ವಹಣೆ ಕುರಿತು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.</p>.<p>ಕೃಷಿ ವಿಜ್ಞಾನ ಕೇಂದ್ರದ ಸಲಹೆಗಾರ ಡಾ.ವಿ.ಎಸ್. ಕೋರಿಕಂಥಿಮಠ, ‘ರೈತರು ಹೆಚ್ಚು ಆದಾಯ ಪಡೆಯಲು ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು’ ಎಂದು ಸಲಹೆ ನೀಡಿದರು.</p>.<p><strong>ಮೌಲ್ಯವರ್ಧಿಸಿ: </strong>ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ‘ರೈತರು ಉತ್ಪಾದಕರ ಕಂಪನಿಯನ್ನು ಪ್ರಾರಂಭಿಸಿ ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಮೌಲ್ಯವರ್ಧಿಸಿ ಹೆಚ್ಚು ಆದಾಯ ಪಡೆಯಬೇಕು’ ಎಂದು ತಿಳಿಸಿದರು.</p>.<p>ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಬೆಂಗಳೂರಿನ ‘ಅಟಾರಿ’ ಸಂಸ್ಥೆಯ ನಿರ್ದೇಶಕ ಡಾ.ವಿ. ವೆಂಕಟಸುಬ್ರಮಣಿಯನ್, ‘ರೈತರು ಕೃಷಿ ವಿಜ್ಞಾನ ಕೇಂದ್ರದಿಂದ ತಂತ್ರಜ್ಞಾನ ಮಾರ್ಗದರ್ಶನ ಪಡೆದು ಅಧಿಕ ಇಳುವರಿ ಪಡೆಯಲು ಪ್ರಯತ್ನಿಸಬೇಕು’ ಎಂದರು.</p>.<p>ಇದೇ ವೇಳೆ, ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಕಟಗೊಂಡ ಸೋಯಾಅವರೆ ಬೆಳೆಯ ತಾಂತ್ರಿಕತೆ ಹಾಗೂ ಕೃಷಿ ಕಾಯ್ದೆ 2020 ಕುರಿತ ಹಸ್ತಪ್ರತಿಗಳನ್ನು ಬಿಡುಗಡೆ ಮಾಡಲಾಯಿತು. ವಿವಿಧ ಗೋಧಿ ತಳಿಗಳ ಪರೀಕ್ಷಾ ತಾಕುಗಳಿಗೆ ಭೇಟಿ ನೀಡಲಾಯಿತು.</p>.<p>ಗೋಧಿ ತಳಿ ವಿಜ್ಞಾನಿ ಸುಮಾ ಬಿರಾದಾರ ಬೆಳೆಯ ತಾಂತ್ರಿಕತೆಗಳನ್ನು ವಿವರಿಸಿದರು. ಸೋಯಾಅವರೆ ಸಂಶೋಧನಾ ಸಂಸ್ಥೆಯ ಡಾ.ಸಂಜೀವ ಗುಪ್ತಾ, ಉಪ ಕೃಷಿ ನಿರ್ದೇಶಕ ಎಚ್.ಡಿ. ಕೋಳೇಕರ, ಉದಯಕುಮಾರ ದೇಸಾಯಿ, ವಿಜ್ಞಾನಿಗಳಾದ ಜಿ.ಬಿ. ವಿಶ್ವನಾಥ, ಡಾ.ಎಸ್.ಎಸ್. ಹಿರೇಮಠ ಇದ್ದರು.</p>.<p>ವಿಜ್ಞಾನಿ ಎಸ್.ಎಂ. ವಾರದ ಸ್ವಾಗತಿಸಿದರು. ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥೆ ಶ್ರೀದೇವಿ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ದೇಸಾಯಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>