ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕಚೇರಿಯೂ ಇಲ್ಲಿದೆ. ವಿತರಣೆ ಕಾರ್ಯಕ್ಕೆ ಸಚಿವರು ಹಾಗೂ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಚಾಲನೆ ನೀಡಿದ್ದರು. ಆಗ ಸರದಿ ಇತ್ತು. ಕ್ರಮೇಣ ನೂರಾರು ಕಾರ್ಮಿಕ ಹಾಗೂ ನೇಕಾರರು (ಬಹುತೇಕರು ಮಹಿಳೆಯರೇ ಇದ್ದರು) ಕಿಟ್ ಪಡೆಯಲು ಅಂತರವನ್ನೂ ಮರೆತು ಮುಗಿಬಿದ್ದರು. ಗೇಟ್ ಬಳಿಯಿಂದ ಓಡಿ ಬರುವಾಗ ಕೆಲವರು ಬಿದ್ದ ಘಟನೆಯೂ ನಡೆಯಿತು. ಜನರನ್ನು ನಿಯಂತ್ರಿಸಲು ಹಾಗೂ ಸರದಿಯಲ್ಲಿ ನಿಲ್ಲಿಸಲು ಚನ್ನಮ್ಮ ಪಡೆಯ ಮಹಿಳಾ ಪೊಲೀಸ್ ಸಿಬ್ಬಂದಿ ಪರದಾಡಿದರು.