<p><strong>ಮೂಡಲಗಿ</strong>: ಘಟಪ್ರಭಾ ನದಿಯ ನೀರಿನ ಒಳ ಹರಿವು ಶುಕ್ರವಾ ಮಧ್ಯಾಹ್ನದಿಂದ ಕಡಿಮೆಯಾಗುತ್ತಿದ್ದು, ಜಲಾವೃತಗೊಂಡಿದ್ದ ತಾಲ್ಲೂಕಿನ ಮಸಗುಪ್ಪಿ ಸೇತುವೆಯು ನದಿ ನೀರಿನಿಂದ ತೆರವು ಗೊಂಡಿದೆ. ಶನಿವಾರ ಬೆಳಿಗ್ಗೆಯಿಂದ ವಾಹನ ಸಂಚಾರ ಯಥಾ ಸ್ಥಿತಿಯಲ್ಲಿ ಪ್ರಾರಂಭಗೊಂಡಿದೆ. ಬೆಳಿಗ್ಗೆ ಸೇತುವೆ ಮೇಲೆ ವಾಹನಗಳ ದಟ್ಟಣೆ ಕಂಡುಬಂತು.</p>.<p>ತಾಲ್ಲೂಕಿನ ಢವಳೇಶ್ವರ, ಅವರಾದಿ, ಹುಣಶ್ಯಾಳ ಪಿವೈ, ಸುಣಧೋಳಿಯ ಬ್ರಿಡ್ಜ್ ಕಮ್ ಬ್ಯಾರೆಜ್ಗಳು ಶನಿವಾರ ಜಲಾವೃತದಿಂದ ಮುಕ್ತವಾಗದೆ ಹಲವು ಗ್ರಾಮಗಳ ಮಧ್ಯದಲ್ಲಿ ಸಂಚಾರವು ನಿಂತಿರುವುದು ಮುಂದುವರೆದಿದೆ.</p>.<p><strong>ಬೆಳೆ ಹಾನಿ:</strong> ಘಟಪ್ರಭಾ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಬೆಳೆದಿರುವ ಕಬ್ಬು, ಗೋವಿನ ಜೋಳ ಬೆಳೆಯಲ್ಲಿ ನದಿ ಹೊಕ್ಕು ತಾಲ್ಲೂಕಿನಲ್ಲಿ ಸಾವಿರಾರು ಎಕರೆಯಷ್ಟು ಬೆಳೆ ಹಾನಿಯಾಗಿದೆ. ನದಿಗೆ ನೀರು ಹೆಚ್ಚಾದಾಗ ರೈತರು ಈ ಸಮಸ್ಯೆಯನ್ನು ಎದುರಿಸುವುದು ಪ್ರತಿ ವರ್ಷ ಸಾಮಾನ್ಯವಾಗಿದೆ ಎಂದು ರೈತರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಲಗಿ</strong>: ಘಟಪ್ರಭಾ ನದಿಯ ನೀರಿನ ಒಳ ಹರಿವು ಶುಕ್ರವಾ ಮಧ್ಯಾಹ್ನದಿಂದ ಕಡಿಮೆಯಾಗುತ್ತಿದ್ದು, ಜಲಾವೃತಗೊಂಡಿದ್ದ ತಾಲ್ಲೂಕಿನ ಮಸಗುಪ್ಪಿ ಸೇತುವೆಯು ನದಿ ನೀರಿನಿಂದ ತೆರವು ಗೊಂಡಿದೆ. ಶನಿವಾರ ಬೆಳಿಗ್ಗೆಯಿಂದ ವಾಹನ ಸಂಚಾರ ಯಥಾ ಸ್ಥಿತಿಯಲ್ಲಿ ಪ್ರಾರಂಭಗೊಂಡಿದೆ. ಬೆಳಿಗ್ಗೆ ಸೇತುವೆ ಮೇಲೆ ವಾಹನಗಳ ದಟ್ಟಣೆ ಕಂಡುಬಂತು.</p>.<p>ತಾಲ್ಲೂಕಿನ ಢವಳೇಶ್ವರ, ಅವರಾದಿ, ಹುಣಶ್ಯಾಳ ಪಿವೈ, ಸುಣಧೋಳಿಯ ಬ್ರಿಡ್ಜ್ ಕಮ್ ಬ್ಯಾರೆಜ್ಗಳು ಶನಿವಾರ ಜಲಾವೃತದಿಂದ ಮುಕ್ತವಾಗದೆ ಹಲವು ಗ್ರಾಮಗಳ ಮಧ್ಯದಲ್ಲಿ ಸಂಚಾರವು ನಿಂತಿರುವುದು ಮುಂದುವರೆದಿದೆ.</p>.<p><strong>ಬೆಳೆ ಹಾನಿ:</strong> ಘಟಪ್ರಭಾ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಬೆಳೆದಿರುವ ಕಬ್ಬು, ಗೋವಿನ ಜೋಳ ಬೆಳೆಯಲ್ಲಿ ನದಿ ಹೊಕ್ಕು ತಾಲ್ಲೂಕಿನಲ್ಲಿ ಸಾವಿರಾರು ಎಕರೆಯಷ್ಟು ಬೆಳೆ ಹಾನಿಯಾಗಿದೆ. ನದಿಗೆ ನೀರು ಹೆಚ್ಚಾದಾಗ ರೈತರು ಈ ಸಮಸ್ಯೆಯನ್ನು ಎದುರಿಸುವುದು ಪ್ರತಿ ವರ್ಷ ಸಾಮಾನ್ಯವಾಗಿದೆ ಎಂದು ರೈತರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>