ಇಲ್ಲಿನ ಧರ್ಮವೀರ ಸಂಭಾಜಿ ಮಹಾರಾಜ ಉದ್ಯಾನ ಬಳಿ, ಎಂಇಎಸ್ ಸದಸ್ಯರು ಕಪ್ಪುಬಟ್ಟೆ ಧರಿಸಿ ಸೈಕಲ್ಗಳನ್ನು ಏರಿ ಬಂದರು. ‘ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಕಾರವಾರ ಸಗಳ ಸಯುಂಕ್ತ ಮಹಾರಾಷ್ಟ್ರ ಝಾಲಾಚ್ ಪಾಹಿಜೆ (ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು)’ ಎಂದು ಘೋಷಣೆ ಕೂಗಿದರು.
‘ರಹೇಂಗೆ ತೋ ಮಹಾರಾಷ್ಟ್ರ ಮೇ ನಹಿ ತೋ ಜೈಲ್ ಮೇ (ಇದ್ದರೆ ಮಹಾರಾಷ್ಟ್ರದಲ್ಲಿ ಇಲ್ಲದಿದ್ದರೆ ಜೈಲಿನಲ್ಲಿ)’, ಬೆಳಗಾಂವ ಹಮ್ಚಾ ಹಕ್ಕಾಚಾ (ಬೆಳಗಾವಿ ನಮ್ಮ ಹಕ್ಕು) ಮುಂತಾದ ಘೋಷಣೆಗಳನ್ನು ನಿರಂತರ ಕೂಗಿದರು. ಪುಟಾಣಿ ಮಕ್ಕಳಿಗೂ ಕಪ್ಪು ಬಟ್ಟೆ ಹಾಕಿ ಮೆರವಣಿಗೆಯಲ್ಲಿ ಕರೆತಂದರು.
ಸಂಭಾಜಿ ಉದ್ಯಾನದಿಂದ ಆರಂಭವಾದ ಮೆರವಣಿಗೆ ತಹಶೀಲ್ ಗಲ್ಲಿ, ಬಾಂಧೂರ ಗಲ್ಲಿ, ಪಾಟೀಲ ಗಲ್ಲಿ, ಎಸ್ಪಿಎಂ ರಸ್ತೆ, ಹೊಸೂರು, ಶಾಸ್ತ್ರೀ ನಗರ, ಶಹಾಪುರದ ಕಚೇರಿ ಗಲ್ಲಿ, ಮೀರಾಪುರ ಗಲ್ಲಿ, ಶಹಾಪುರದ ಖಡೇಬಜಾರ್, ರೈಲ್ವೆ ಮೇಲ್ಸೇತುವೆ ಮೂಲಕ ಸಾಗಿ ಮರಾಠ ಮಂದಿರ ಬಳಿ ಮುಕ್ತಾಯವಾಯಿತು.