ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕರಿಂದ ಬಸ್ ಸೇವೆಗೆ ಚಾಲನೆ

Published 22 ನವೆಂಬರ್ 2023, 13:28 IST
Last Updated 22 ನವೆಂಬರ್ 2023, 13:28 IST
ಅಕ್ಷರ ಗಾತ್ರ

ರಾಯಬಾಗ: ತಾಲ್ಲೂಕಿನ ಬಾವನಸೌಂದತ್ತಿಯಿಂದ ತೆರಳುವ ಪ್ರಯಾಣಿಕರಿಗೆ ಹಾಗೂ ಗ್ರಾಮದಿಂದ ದಿಗ್ಗೇವಾಡಿ, ಭಿರಡಿ, ಚಿಂಚಲಿ, ಕುಡಚಿ ಮಾರ್ಗದ ವರೆಗೆ ಮರಳಿ ಇದೇ ಮಾರ್ಗದ ಮುಖಾಂತರ ಅಂಕಲಿ, ಚಿಕ್ಕೋಡಿ ಮತ್ತು ಬೆಳಗಾವಿಗೆ ಪ್ರಯಾಣಿಸುವ ಬಸ್ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರು ಈ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ಸಮೀಪದ ಬಾವನಸೌಂದತ್ತಿ ಗ್ರಾಮದಲ್ಲಿ ಬುಧವಾರ ಬಸ್ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಮಚಂದ್ರ ಕಾಟೆ, ತಾತ್ಯಾಸಾಬ ಕಾಟೆ, ಧೂಳಗೌಡ ಪಾಟೀಲ, ಆಜಾದ ತಾಶೀವಾಲೆ, ಸದಾಶಿವ ಘೋರ್ಪಡೆ, ಸತ್ಯಪ್ಪ ಬಿಸ್ಟೆ, ಅನಿಲ ಹಂಜೆ, ಅನ್ನಾಸಾಬ ಮಗದುಮ, ರಮಝಾನ್ ಮಕಾಣದಾರ, ಅಜಿತ ಖೆಮಲಾಪೂರೆ, ಶಶಿ ಹಂಚಿನಾಳಕರ, ಎಸ್.ಎಸ್.ನ್ಯಾಮಗೌಡರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT