ಖಾನಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ ಶಿಂಧೆ ನೇತೃತ್ವದಲ್ಲಿ ಲೋಂಡಾ ಪೊಲೀಸರು ಬೋಟ್ನಲ್ಲಿ ತೆರಳಿ ವ್ಯಕ್ತಿಯನ್ನು ರಕ್ಷಿಸಿದರು. ‘ನದಿಯಲ್ಲಿ ನೀರಿನ ಪ್ರಮಾಣ ಇನ್ನೊಂದು ಅಡಿ ಹೆಚ್ಚಾಗಿದ್ದರೂ ವ್ಯಕ್ತಿಯ ಪ್ರಾಣಕ್ಕೆ ಅಪಾಯವಿತ್ತು. ನಮ್ಮ ಪೊಲೀಸರು ಧೈರ್ಯದಿಂದ ಕಾರ್ಯಾಚರಣೆ ನಡೆಸಿ, ಅವರನ್ನು ರಕ್ಷಿಸಿದ್ದಾರೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.